alex Certify ಓಡಿಶಾದ ಪ್ರಮುಖ ಹಬ್ಬಕ್ಕೆ ಮರಳು ಕಲಾಕೃತಿ ಮೂಲಕ ಶುಭಾಶಯ ತಿಳಿಸಿದ ಸುದರ್ಶನ್​ ಪಟ್ನಾಯಕ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಓಡಿಶಾದ ಪ್ರಮುಖ ಹಬ್ಬಕ್ಕೆ ಮರಳು ಕಲಾಕೃತಿ ಮೂಲಕ ಶುಭಾಶಯ ತಿಳಿಸಿದ ಸುದರ್ಶನ್​ ಪಟ್ನಾಯಕ್​

ಗಣೇಶ ಚತುರ್ಥಿ ಹಾಗೂ ನುವಾಖೈ ಜುಹಾರ್​ ಹಬ್ಬದ ವಿಶೇಷವಾಗಿ ಖ್ಯಾತ ಮರಳು ಕಲಾವಿದ ಸುದರ್ಶನ್​​ ಪಾಟ್ನಾಯಕ್​ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕಲಾಕೃತಿ ಮೂಲಕ ಧೂಳೆಬ್ಬಿಸಿದ್ದಾರೆ.

ಈ ವರ್ಷ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್​ 10ರಂದು ಆಚರಣೆ ಮಾಡಲಾಗಿದ್ದರೆ, ಓಡಿಶಾದ ಪ್ರಮುಖ ಸುಗ್ಗಿ ಹಬ್ಬ ನುವಾಕೈ ಜುಹಾರ್​​ನ್ನು ಮಾರನೇ ದಿನ ಅಂದರೆ ಶನಿವಾರ ಆಚರಿಸಲಾಗಿದೆ.

ಸುದರ್ಶನ್​ ಪಟ್ನಾಯಕ್​ ಮರಳಿನಲ್ಲಿ ಗಣೇಶನ ಮೂರ್ತಿ ಹಾಗೂ ಸುಗ್ಗಿ ಹಬ್ಬದ ಕಲಾಕೃತಿಗಳನ್ನು ಪುರಿ ಕಡಲತೀರದಲ್ಲಿ ರಚಿಸಿದ್ದಾರೆ.

ಇದು ಹೊಸಕ್ಕಿ ಹಬ್ಬವಾಗಿದ್ದು ಹೀಗಾಗಿ ಭತ್ತದ ತೆನೆಯನ್ನು ಪಾಟ್ನಾಯಕ್​ ಚಿತ್ರಿಸಿದ್ದಾರೆ. ಗಣೇಶ ಚತುರ್ಥಿಯ ಮಾರನೇ ದಿನ ಒಡಿಶಾದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ.

ನುವಾಖೈ ಓಡಿಶಾ ಹಾಗೂ ಜಾರ್ಖಂಡ್​ನಲ್ಲಿ ಪ್ರಮುಖ ಹಬ್ಬವಾಗಿದೆ. ಗಣೇಶ ಮೂರ್ತಿಯನ್ನು ಸುದರ್ಶನ್​ ಬರೋಬ್ಬರಿ 7000 ಚಿಪ್ಪುಗಳನ್ನು ಬಳಸಿ ನಿರ್ಮಿಸಿದ್ದಾರೆ.

— Sudarsan Pattnaik (@sudarsansand) September 10, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...