alex Certify ಆಸ್ತಿ ನೋಂದಣಿಗೆ ಕಾವೇರಿ ತಂತ್ರಾಂಶದಡಿ ಟೋಕನ್ ಸಿಸ್ಟಂ ಪಾಲಿಸಲು ಸಚಿವ ಕೃಷ್ಣ ಬೈರೇಗೌಡ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ತಿ ನೋಂದಣಿಗೆ ಕಾವೇರಿ ತಂತ್ರಾಂಶದಡಿ ಟೋಕನ್ ಸಿಸ್ಟಂ ಪಾಲಿಸಲು ಸಚಿವ ಕೃಷ್ಣ ಬೈರೇಗೌಡ ಸೂಚನೆ

ಕಲಬುರಗಿ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಬುಧವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆಗೆ ಡಿಸಿ ಕಚೇರಿ ಆಗಮಿಸಿದಾಗ ಮಿನಿ ವಿಧಾನಸೌಧದಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಿದರು.

ಕಚೇರಿ ಹೊರಗಡೆ ಜನಜಂಗುಳಿ ಕಂಡ‌ ಸಚಿವರು, ಸಾರ್ವಜನಿಕರ ಆಸ್ತಿ ನೋಂದಣಿಗೆ ಸಮಯ ನೀಡಿಲ್ವಾ ಎಂದು ಪ್ರಶ್ನಿಸಿದರು. ಎಲ್ಲರು ಒಂದೇ ಸಮಯಕ್ಕೆ ಬಂದಿರುವುದನ್ನು ಗಮನಿಸಿದ ಸಚಿವರು, ಇಲ್ಲಿ ಟೋಕನ್ ಸಿಸ್ಟಮ್ ಪಾಲಿಸುತ್ತಿಲ್ವಾ ಎಂದು ಸಬ್ ರಿಜಿಸ್ಟ್ರಾರ್ ಬಿ.ಶ್ರಿಕಾಂತ್ ಅವರನ್ನು ಪ್ರಶ್ನಿಸಿದ್ದಾರೆ. ಬಿ.ಶ್ರೀಕಾಂತ ಉತ್ತರಿಸಿ ಸಾರ್ವಜನಿಕರಿಗೆ ಪೋರ್ಟಲ್ ನಲ್ಲಿ ಸಮಯ ನೀಡಿದ್ದಂತೆ ಮೊದಲು ಬಂದವರಿಗೆ ಅದ್ಯತೆ ನೀಡಲಾಗುತ್ತಿದೆ ಎಂದರು.

ಕಾವೇರಿ ತಂತ್ರಾಂಶದಲ್ಲಿ ಸಾರ್ವಜನಿಕರ ಆಸ್ತಿ ನೋಂದಣಿಗೆ ಸ್ವಯಂ ಸಮಯ ದಿನಾಂಕ ನಿಗದಿಪಡಿಸಲು ಅವಕಾಶ ನೀಡಲಾಗಿದೆ. ಅದರಂತೆ ಸಮಯ ನಿಗದಿ ಮಾಡಿಕೊಂಡು ನಿಗದಿತ ಸಮಯಕ್ಕೆ ಬರುವವರನ್ನು ಮೊದಲು ಆದ್ಯತೆ ನೀಡಬೇಕು. ಉದಾಹರಣೆಗೆ 10 ಗಂಟೆಗೆ ನೋಂದಣಿ ಸಮಯ‌ ನೀಡಿದಾಗ ವ್ಯಕ್ತಿ 11 ಗಂಟೆಗೆ ಬಂದಲ್ಲಿ ಅಂತಹವರನ್ನು ಕೂರಿಸಿ 11 ಗಂಟೆ‌ಗೆ ಸರಿಯಾದ ಸಮಯಕ್ಕೆ ಬಂದವರನ್ನು ಮೊದಲು ಆದ್ಯತೆಯನ್ನಾಗಿ ಪರಿಗಣಿಸಬೇಕು ಎಂದರು.

ಎಲ್ಲರೂ ಒಮ್ಮೆಲೆ ನೋಂದಣಿಗೆ ಬಂದರೆ ಕೂಡಲು ಜಾಗ ಇರಲ್ಲ, ಕುಡಿಯಲು ನೀರಿರಲ್ಲ. ಮಕ್ಕಳು, ವೃದ್ಧರು, ಮಹಿಳೆಯರು ಬರ್ತಾರೆ. ಕಚೇರಿ ಕೆಲಸ ತಡವಾದಲ್ಲಿ ಸರ್ಕಾರಕ್ಕೆ ಹಿಡಿಶಾಪ ಹಾಕ್ತಾರೆ. ಇದನ್ನೆಲ್ಲ ಅರಿತು ತ್ವರಿತಗತಿಯಲ್ಲಿ ಕೆಲಸ ಮಾಡಿಕೊಡಬೇಕು ಎಂದರು.

ಕಂದಾಯ ಆಯುಕ್ತ ಸುನಿಲ್ ಕುಮಾರ್, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಎಸಿ ಆಶಪ್ಪ ಪೂಜಾರಿ, ಜಿಲ್ಲಾ ರಿಜಿಸ್ಟ್ರಾರ್ ಎಂ.ಎ. ಆಸೀಫ್ ಮತ್ತಿತರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...