alex Certify ‘ಗೃಹಲಕ್ಷ್ಮಿ’ ನೋಂದಣಿ ಮಾಡುವುದಾಗಿ ನಂಬಿಸಿ 40 ಗ್ರಾಂ ಚಿನ್ನಾಭರಣ ಕದ್ದೊಯ್ದ ಖದೀಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಗೃಹಲಕ್ಷ್ಮಿ’ ನೋಂದಣಿ ಮಾಡುವುದಾಗಿ ನಂಬಿಸಿ 40 ಗ್ರಾಂ ಚಿನ್ನಾಭರಣ ಕದ್ದೊಯ್ದ ಖದೀಮ

ರಾಮನಗರ :   ಗೃಹಲಕ್ಷ್ಮಿ ಯೋಜನೆ ನೊಂದಣಿ ಮಾಡುವುದಾಗಿ ನಂಬಿಸಿದ ಖತರ್ನಾಕ್ ಕಳ್ಳ ಚಿನ್ನಾಭರಣ ಕದ್ದೊಯ್ದ ಘಟನೆ ರಾಮನಗರದಲ್ಲಿ ನಡೆದಿದೆ.

ಸಾವಿತ್ರಮ್ಮ (62) ಎಂಬ ವೃದ್ದೆಯ ಚಿನ್ನಾಭರಣ ಕಸಿದು ಕಳ್ಳ ಎಸ್ಕೇಪ್ ಆಗಿದ್ದಾನೆ. ವೃದ್ದೆ ಒಂಟಿಯಾಗಿರುವುದನ್ನು ನಂಬಿಸಿ ಮನೆಗೆ ನುಗ್ಗಿದ ಖದೀಮ ನಂಬಿಕೆ ಬರುವಂತೆ ಮಾತನಾಡಿದ್ದಾರೆ. ನೀವು ಗೃಹಲಕ್ಷ್ಮಿಗೆ ಅರ್ಜಿ ಹಾಕಿದ್ದೀರಾ.. ? ಎಂದು ಪ್ರಶ್ನಿಸಿದ್ದಾನೆ . ಇಲ್ಲ ಎಂದು ವೃದ್ದೆ ಹೇಳಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮ ನಾವು ಪೋಸ್ಟ್ ಆಫೀಸ್ ನಿಂದ ಹಣ ಬರುವ ಹಾಗೆ ಮಾಡುತ್ತೇವೆ ಎಂದು ನಂಬಿಸಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಅಲ್ಲಿ ಕಣ್ಣು ಪರೀಕ್ಷೆ ಮಾಡಿಸಬೇಕು ಎಂದು ಚಿನ್ನಾಭರಣ ತೆಗೆದುಕೊಡಿ ಎಂದು ಹೇಳಿದ್ದಾರೆ. ಖದೀಮನ ಮಾತು ಕೇಳಿದ ಅಜ್ಜಿ ಚಿನ್ನಾಭರಣ ತೆಗೆದುಕೊಟ್ಟಿದ್ದಾರೆ. ಕೂಡಲೇ ಖದೀಮ ಚಿನ್ನಾಭರಣದ ಜೊತೆ ಎಸ್ಕೇಪ್ ಆಗಿದ್ದಾರೆ. ಚನ್ನಟ್ಟಣಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...