alex Certify ಉಂಡ ಮನೆಗೆ ದ್ರೋಹ ಬಗೆಯೋದೇ ವಿಶ್ವನಾಥ್​ ಕೆಲಸ: ಎಸ್​.ಆರ್.​ ವಿಶ್ವನಾಥ್​ ಕಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಂಡ ಮನೆಗೆ ದ್ರೋಹ ಬಗೆಯೋದೇ ವಿಶ್ವನಾಥ್​ ಕೆಲಸ: ಎಸ್​.ಆರ್.​ ವಿಶ್ವನಾಥ್​ ಕಿಡಿ

ಬಿ.ಎಸ್.​ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಲ್ಲಿ ಇರುವ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ ಎಂಎಲ್​ಸಿ ಹೆಚ್​. ವಿಶ್ವನಾಥ್​ ವಿರುದ್ಧ ಶಾಸಕ ಎಸ್​.ಆರ್.​ ವಿಶ್ವನಾಥ್​ ಕೆಂಡಕಾರಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಆಂತರಿಕ ಬಿಕ್ಕಟ್ಟು ಶಮನದ ವಿಚಾರವಾಗಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​ರನ್ನ ಇಂದು ವಿಶ್ವನಾಥ್​ ಭೇಟಿಯಾಗಿದ್ದರು.

ಸಿಎಂ ಯಡಿಯೂರಪ್ಪ ವಿರುದ್ಧ ಬಹಿರಂಗ ಹೇಳಿಕೆ ನೀಡಿದ ಹೆಚ್​. ವಿಶ್ವನಾಥ್​ ವಿರುದ್ಧ ಬೆಂಗಳೂರಿನಲ್ಲಿ ಕಿಡಿಕಾರಿದ ಶಾಸಕ ಎಸ್​.ಆರ್.​ ವಿಶ್ವನಾಥ್​, ಎಂಎಲ್​ಸಿ ವಿಶ್ವನಾಥ್​​ಗೆ ರಾಜ್ಯದ ಸಿಎಂರನ್ನ ಆಯ್ಕೆ ಮಾಡುವ ಅವಕಾಶ ನೀಡಲಾಗಿಲ್ಲ. ನಮ್ಮ ಅಭಿಪ್ರಾಯ ಏನಿದೆ ಅದನ್ನಷ್ಟನ್ನೇ ಹೇಳಬೇಕು. ಅದನ್ನ ಬಿಟ್ಟು ಈ ರೀತಿಯ ಬಹಿರಂಗ ಹೇಳಿಕೆ ನೀಡೋದು ಪಕ್ಷದ ನಿಯಮಗಳ ಉಲ್ಲಂಘನೆಯಾಗುತ್ತದೆ.

ವಿಶ್ವನಾಥ್​ ಉಂಡ ಮನೆಗೆ ದ್ರೋಹ ಬಗೀತಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಈ ಹಿಂದೆ ಕಾಂಗ್ರೆಸ್​ ಹಾಗೂ ಜೆಡಿಎಸ್​ನಲ್ಲಿ ಇದ್ದಾಗಲೂ ಸಹ ವಿಶ್ವನಾಥ್​ ಏನು ಮಾಡಿದ್ದಾರೆ ಅನ್ನೋದನ್ನ ಇತಿಹಾಸ ಹೇಳುತ್ತೆ. ವಿಶ್ವನಾಥ್​ ರೋಡಲ್ಲಿ ಬಡಬಡಾಯಿಸುತ್ತಾ ತಿರುಗುವ ಅರೆಹುಚ್ಚನಂತಾಗಿದ್ದಾರೆ. ಅವರನ್ನ ಮೊದಲು ಸೂಕ್ತ ಚಿಕಿತ್ಸೆಗಾಗಿ ಮಾನಸಿಕ ರೋಗಿಗಳ ಆಸ್ಪತ್ರೆಗೆ ದಾಖಲು ಮಾಡಬೇಕು. ತಮಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಹತಾಶೆಯಲ್ಲಿ ವಿಶ್ವನಾಥ್​ ಈ ರೀತಿಯೆಲ್ಲ ಹೇಳಿಕೆ ನೀಡ್ತಿದ್ದಾರೆ ಎಂದು ಕಿಡಿಕಾರಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...