alex Certify ವಿಜಯೇಂದ್ರಗೆ ರೈಲು ಹತ್ತಿಸಿ ಹರಕೆಯ ಕುರಿ ಮಾಡಬೇಡಿ; ಯಾರನ್ನೂ ಚಿಕ್ಕವರಾಗಿ ಮಾಡಬೇಡಿ: 40 ವರ್ಷದ ರಾಜಕೀಯದಲ್ಲಿ ಎಲ್ಲಾ ಆಟ ನೋಡಿದ್ದೇನೆ; ಗುಡುಗಿದ ಸಚಿವ ಸೋಮಣ್ಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಜಯೇಂದ್ರಗೆ ರೈಲು ಹತ್ತಿಸಿ ಹರಕೆಯ ಕುರಿ ಮಾಡಬೇಡಿ; ಯಾರನ್ನೂ ಚಿಕ್ಕವರಾಗಿ ಮಾಡಬೇಡಿ: 40 ವರ್ಷದ ರಾಜಕೀಯದಲ್ಲಿ ಎಲ್ಲಾ ಆಟ ನೋಡಿದ್ದೇನೆ; ಗುಡುಗಿದ ಸಚಿವ ಸೋಮಣ್ಣ

ಮೈಸೂರು; ಬಿ.ವೈ. ವಿಜಯೇಂದ್ರರಿಗೆ ಅದೃಷ್ಟವಿದ್ದರೆ ಉನ್ನತ ಸ್ಥಾನಕ್ಕೆ ಹೋಗುತ್ತಾನೆ. ಸುಮ್ಮನೆ ರೈಲು ಹತ್ತಿಸಿ ಹಾಳು ಮಾಡಬೇಡಿ ಎಂದು ಮೈಸೂರಿನಲ್ಲಿ ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸೋಮಣ್ಣ, ವಿಜಯೇಂದ್ರನ ಮುಂದೆ ಯಾರನ್ನೂ ಚಿಕ್ಕವರನ್ನಾಗಿ ಮಾಡಬೇಡಿ. ಯಡಿಯೂರಪ್ಪ ಪುತ್ರ ವಿಜಯೇಂದ್ರನನ್ನ ಹರಕೆಯ ಕುರಿ ಮಾಡಬೇಡಿ. ಘೋಷಣೆ ಕೂಗಿ ಅವರನ್ನು ಹರಕೆಯ ಕುರಿ ಮಾಡಬೇಡಿ ಎಂದು ಹೇಳಿದ್ದು. ಸಚಿವ ಸೋಮಣ್ಣನವರ ಮಾತಿಗೆ ವಿಜಯೇಂದ್ರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳನ್ನು ಖುದ್ದು ಬಿ.ವೈ. ವಿಜಯೇಂದ್ರ ಸಮಾಧಾನ ಮಾಡಿದ್ದಾರೆ.

ನಾನು ಐದಾರು ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ಗೌರವ ಕೊಡುವುದನ್ನು ಕಲಿಯಿರಿ ಎಂದು ಸೋಮಣ್ಣ ಚಾಟಿ ಬೀಸಿದ್ದಾರೆ. ಸೋಮಣ್ಣ ಭಾಷಣ ಮಾಡುವಾಗ, ವಿಜಯೇಂದ್ರರಿಗೆ ಜೈಕಾರ ಕೂಗಿದವರಿಗೆ ಚಾಟಿ ಬೀಸಿದ್ದು, 40 ವರ್ಷ ರಾಜಕೀಯ ಮಾಡಿದ್ದೇನೆ. ಎಲ್ಲಾ ಆಟಗಳನ್ನು ನೋಡಿದ್ದೇನೆ. ಸ್ವಲ್ಪ ಸುಮ್ಮನೆ ಕುಳಿತುಕೊಳ್ಳಿ ಎಂದು ಸಿಡಿಮಿಡಿಗೊಂಡಿದ್ದಾರೆ.

ವೇದಿಕೆಯ ಮೇಲೆ ವಿಜಯೇಂದ್ರ ಅವರಿಗೆ ಹೂಗುಚ್ಛ ನೀಡಲು ಬಂದಿದ್ದ ಅಭಿಮಾನಿ ಮೇಲೆ ಸಿಡಿಮಿಡಿಗೊಂಡ ಸೋಮಣ್ಣ ಮೊದಲು ಶಿಸ್ತು ಕಲಿತುಕೊಳ್ಳಿ ಎಂದು ತಾಕೀತು ಮಾಡಿದ್ದಾರೆ.

ಕೆಂಪೇಗೌಡರ ಊರಲ್ಲಿ ಈ ಸೋಮಣ್ಣ 5 ಬಾರಿ ಶಾಸಕನಾಗಿದ್ದೇನೆ. ಸ್ವತಂತ್ರವಾಗಿಯೂ ಗೆದ್ದಿದ್ದೇನೆ ಎಂದು ಸೋಮಣ್ಣ ಆಕ್ರೋಶದ ಭಾಷಣ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...