alex Certify ಜಸ್ಟ್ ಮಿಸ್: ತಡರಾತ್ರಿ ಸಮಾಜವಾದಿ ಪಕ್ಷದ ನಾಯಕನ ಕಾರ್ ಗೆ ಡಿಕ್ಕಿ ಹೊಡೆದು 500 ಮೀಟರ್ ಎಳೆದೊಯ್ದ ಟ್ರಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಸ್ಟ್ ಮಿಸ್: ತಡರಾತ್ರಿ ಸಮಾಜವಾದಿ ಪಕ್ಷದ ನಾಯಕನ ಕಾರ್ ಗೆ ಡಿಕ್ಕಿ ಹೊಡೆದು 500 ಮೀಟರ್ ಎಳೆದೊಯ್ದ ಟ್ರಕ್

ಮೈನ್‌ ಪುರಿ: ಉತ್ತರ ಪ್ರದೇಶದ ಮೈನ್‌ ಪುರಿಯಲ್ಲಿ ಮಧ್ಯರಾತ್ರಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ದೇವೇಂದ್ರ ಸಿಂಗ್ ಯಾದವ್ ಅವರ ಕಾರ್ ರಿಗೆ ಟ್ರಕ್ ಡಿಕ್ಕಿ ಹೊಡೆದು ವಾಹನವನ್ನು ಸುಮಾರು 500 ಮೀಟರ್ ಎಳೆದೊಯ್ದಿದೆ.

ಅಪಘಾತದ ಸಮಯದಲ್ಲಿ ದೇವೇಂದ್ರ ಸಿಂಗ್ ಒಬ್ಬರೇ ಕಾರ್ ನಲ್ಲಿ ಇದ್ದು, ಅವರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಆದಾಗ್ಯೂ, ಪೊಲೀಸರು ಈ ವಿಷಯದ ಬಗ್ಗೆ ದೂರು ದಾಖಲಿಸಿದ್ದಾರೆ. ಟ್ರಕ್ ಚಾಲಕನನ್ನು ಬಂಧಿಸಿದ್ದಾರೆ.

ಸಮಾಜವಾದಿ ಪಕ್ಷದ ನಾಯಕನ ಕಾರ್ ಗೆ ಟ್ರಕ್ ಡಿಕ್ಕಿ ಹೊಡೆದ ನಂತರ ಅದನ್ನು 500 ಮೀಟರ್‌ಗೂ ಹೆಚ್ಚು ಎಳೆಯಲಾಯಿತು. ಇಟಾವಾದಿಂದ ಟ್ರಕ್ ಚಾಲಕನನ್ನು ಬಂಧಿಸಲಾಗಿದೆ. ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆ ಎಂದು ಮೈನ್‌ ಪುರಿ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ) ಕಮಲೇಶ್ ದೀಕ್ಷಿತ್ ಹೇಳಿದ್ದಾರೆ.

ವರದಿಗಳ ಪ್ರಕಾರ, ಸಿಂಗ್ ಅವರು ಕಾರ್ಹಾಲ್ ರಸ್ತೆಯ ಮೂಲಕ ತಮ್ಮ ಮನೆಗೆ ಹೋಗುತ್ತಿದ್ದಾಗ ಮೈನ್‌ಪುರಿಯ ಸದರ್ ಕೊಟ್ವಾಲಿ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...