alex Certify ನನ್ನ ಸುತ್ತ ತುಂಬಾ ಬಂದೂಕುಗಳು ಸುತ್ತುತ್ತಿವೆ; ಕೊಲೆ ಬೆದರಿಕೆ ಬಗ್ಗೆ ‘ಭಾಯಿಜಾನ್’ ಮುಕ್ತ ಮಾತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನನ್ನ ಸುತ್ತ ತುಂಬಾ ಬಂದೂಕುಗಳು ಸುತ್ತುತ್ತಿವೆ; ಕೊಲೆ ಬೆದರಿಕೆ ಬಗ್ಗೆ ‘ಭಾಯಿಜಾನ್’ ಮುಕ್ತ ಮಾತು

ಕೊಲೆ ಬೆದರಿಕೆಗಳನ್ನು ಎದುರಿಸುತ್ತಿರುವ ಮತ್ತು ಭೂಗತ ಲೋಕದ ಟಾರ್ಗೆಟ್ ಲಿಸ್ಟ್ ನಲ್ಲಿರುವ ಸಲ್ಮಾನ್ ಖಾನ್ ಅಂತಿಮವಾಗಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದು ಬೆದರಿಕೆಯನ್ನು ಹೇಗೆ ಎದುರಿಸುತ್ತಿದ್ದಾರೆ ಎಂಬುದನ್ನ ತಿಳಿಸಿದ್ದಾರೆ.

ಬೆದರಿಕೆ ಬಳಿಕ ತಮ್ಮ ಜೀವನದಲ್ಲಾಗಿರುವ ಬದಲಾವಣೆಗಳನ್ನು ನಟ ಸಲ್ಮಾನ್ ಖಾನ್ ಇಂಡಿಯಾ ಟಿವಿಯ ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಅಭದ್ರತೆಗಿಂತ ಭದ್ರತೆ ಉತ್ತಮವಾಗಿದೆ ಎಂದಿರುವ ಸಲ್ಮಾನ್ ಖಾನ್, ಮೊದಲಿನಂತೆ ಈಗ ರಸ್ತೆಯಲ್ಲಿ ಸೈಕಲ್ ಓಡಿಸಲು ಆಗಲ್ಲ, ಎಲ್ಲಿಗೂ ಒಬ್ಬಂಟಿಯಾಗಿ ಹೋಗಲು ಸಾಧ್ಯವಿಲ್ಲ. ಅದಕ್ಕಿಂತ ಹೆಚ್ಚಾಗಿ ನಾನು ಟ್ರಾಫಿಕ್‌ನಲ್ಲಿರುವಾಗ ತುಂಬಾ ಭದ್ರತೆ ಇರುತ್ತದೆ. ವಾಹನಗಳು ಇತರರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತವೆ. ನನ್ನನ್ನು ನೋಡುವ ನನ್ನ ಅಭಿಮಾನಿಗಳು ಇಂತಹ ಸಂದರ್ಭದಲ್ಲಿ ನನ್ನ ಬಳಿ ಬರಲು ಆಗುವುದಿಲ್ಲ. ಗಂಭೀರ ಬೆದರಿಕೆ ಇದೆ ಅದಕ್ಕಾಗಿಯೇ ಭದ್ರತೆ ಇದೆ ಎಂದಿದ್ದಾರೆ.

‘ಕಿಸಿ ಕಾ ಭಾಯಿ ಕಿಸಿ ಕಿ ಜಾನ್’ ಚಿತ್ರದಲ್ಲಿ ‘ಅವರಿಗೆ 100 ಬಾರಿ ಅದೃಷ್ಟ ಬರಬೇಕು’ ಎಂಬ ಡೈಲಾಗ್ ಇದೆ, ಆದರೆ ನಾನು ಒಮ್ಮೆ ಅದೃಷ್ಟಶಾಲಿಯಾಗಬೇಕು. ಹಾಗಾಗಿ ನಾನು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.

ನಾನು ಎಲ್ಲ ಕಡೆಯೂ ಸಂಪೂರ್ಣ ಭದ್ರತೆಯೊಂದಿಗೆ ಹೋಗುತ್ತಿದ್ದೇನೆ. ನಾವೇನೇ ಮಾಡಿದರೂ ಆಗಬೇಕಾದ್ದು ಸಂಭವಿಸುತ್ತದೆ ಎಂದು ನನಗೆ ತಿಳಿದಿದೆ. ದೇವರು ಅಲ್ಲಿದ್ದಾನೆ ಎಂದು ನಾನು ನಂಬುತ್ತೇನೆ. ನಾನು ಮುಕ್ತವಾಗಿ ತಿರುಗಾಡಲು ಪ್ರಾರಂಭಿಸುತ್ತೇನೆ ಎಂದಲ್ಲ. ಈಗ ನನ್ನ ಸುತ್ತಲೂ ತುಂಬಾ ಸಿಂಹಗಳಿವೆ, ಅನೇಕ ಬಂದೂಕುಗಳು ನನ್ನೊಂದಿಗೆ ಸುತ್ತಾಡುತ್ತಿವೆ. ಈ ದಿನಗಳಲ್ಲಿ ನಾನು ಹೆದರುತ್ತೇನೆ ಎಂದಿದ್ದಾರೆ.

ಕೊಲೆ ಬೆದರಿಕೆಯ ನಂತರ ಕೆಲವು ದಿನಗಳ ಹಿಂದೆ ಫೋನ್ ಕರೆಯಲ್ಲಿ ಸಲ್ಮಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ ಮುಂಬೈ ಪೊಲೀಸರು ಅಪ್ರಾಪ್ತರನ್ನು ಬಂಧಿಸಿದ್ದರು. ಮಾರ್ಚ್ 26 ರಂದು, ಸಲ್ಮಾನ್‌ಗೆ ಬೆದರಿಕೆ ಮೇಲ್ ಕಳುಹಿಸಿದ್ದಕ್ಕಾಗಿ ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ಲುನಿ ನಿವಾಸಿ ಧಕದ್ ರಾಮ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಬಂಧಿಸಲಾಯಿತು. ಆತನನ್ನು ಬಂಧಿಸಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

ಬೆದರಿಕೆ ಕರೆ ನಂತರ ಮುಂಬೈ ಪೊಲೀಸರು ಸಲ್ಮಾನ್ ಖಾನ್‌ಗೆ Y+ ವರ್ಗದ ಭದ್ರತೆಯನ್ನು ಒದಗಿಸಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಪತ್ರ ಬಂದ ನಂತರ ಮಹಾರಾಷ್ಟ್ರ ಸರ್ಕಾರ ಹೆಚ್ಚಿನ ಭದ್ರತೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...