![](https://kannadadunia.com/wp-content/uploads/2022/04/cobra-snake-viper-reptile.jpg)
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಎನ್ಆರ್ ಪುರ ತಾಲೂಕಿನ ಶೆಟ್ಟಿಕೊಪ್ಪದಲ್ಲಿ ಶುಕ್ರವಾರ ಸಂಜೆ 12 ಅಡಿ ಉದ್ದದ ಕಾಳಿಂಗ ಸರ್ಪ ಅಡುಗೆ ಮನೆಗೆ ನುಗ್ಗಿದೆ. ಅದನ್ನು ಸುರಕ್ಷಿತವಾಗಿ ಹಿಡಿದು ಅಭಯಾರಣ್ಯಕ್ಕೆ ಬಿಡಲಾಗಿದೆ.
ಡಿ. ಮಂಜುನಾಥಗೌಡ ಅವರು ಮನೆಯಲ್ಲಿ ಸ್ನಾನ ಮಾಡಿ ಬಟ್ಟೆ ಒಣ ಹಾಕಲು ಹಿಂಬದಿಯ ಬಾಗಿಲು ತೆಗೆಯುತ್ತಿದ್ದಂತೆ ದಿಢೀರನೆ ಕಾಳಿಂಗ ಸರ್ಪ ಒಳಗೆ ನುಗ್ಗಿ ಅಡುಗೆ ಮನೆ ಸೇರಿಕೊಂಡಿದೆ. ಗಾಬರಿಯಾದ ಕುಟುಂಬದವರು ಕೂಡಲೇ ಕುದುರೆಗುಂಡಿ ಉರಗ ಪ್ರೇಮಿ ಪಿ.ಜಿ. ಹರೀಂದ್ರ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ಹರೀಂದ್ರ ಕಾಳಿಂಗ ಸರ್ಪವನ್ನು ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳ ಸಲಹೆ ಪಡೆದು ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.