alex Certify ಆಕಾಶ ಬುಟ್ಟಿಯಿಂದಾದ ಅವಾಂತರ; ಮನೆಗೆ ಬೆಂಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಕಾಶ ಬುಟ್ಟಿಯಿಂದಾದ ಅವಾಂತರ; ಮನೆಗೆ ಬೆಂಕಿ

ಹುಬ್ಬಳ್ಳಿ: ದೀಪಾವಳಿ ಸಮಯದಲ್ಲಿ ಆಕಾಶ ದೀಪ, ಆಕಾಶ ಬುಟ್ಟಿ ಬಳಸೋದು ಕಾಮನ್. ಆದರೆ ಈ ದೀಪವೇ ಮನೆ ಸುಡುತ್ತೆ ಅಂದರೆ ಹೇಗೆ..? ಯಾರದ್ದೋ ಆಕಾಶ ದೀಪ ಮತ್ತೊಬ್ಬರ ಮನೆ ಸುಡೋದು ಅಂದರೆ ಇದು ನತದೃಷ್ಟವೇ ಸರಿ.

ಹೌದು, ಹುಬ್ಬಳ್ಳಿಯಲ್ಲಿ ಮನೆ ಮೇಲೆ ಆಕಾಶ ಬುಟ್ಟಿ ಬಿದ್ದಿದೆ. ಈ ಪರಿಣಾಮ ಮನೆ ಹೊತ್ತಿ ಉರಿದಿದೆ. ಈ ಘಟನೆ ಹುಬ್ಬಳ್ಳಿಯ ಘಂಟಿಕೇರಿ ಓಣಿಯ ರಾಘವೇಂದ್ರ ಮಠದ ಬಳಿ ನಡೆದಿದೆ. ಶಿವರಾಜ ತಾಳಿಕೋಟಿ ಎಂಬುವರಿಗೆ ಸೇರಿದ ಮನೆ ಇದಾಗಿದೆ. ಬೇರೆಡೆಯಿಂದ ಬಂದ ಆಕಾಶ ಬುಟ್ಟಿ ಇವರ ಮನೆ ಮೇಲೆ ಬಿದ್ದು ಬೆಂಕಿ ಹತ್ತಿಕೊಳ್ಳುವಂತೆ ಮಾಡಿದೆ.

ಇನ್ನು ಈ ಘಟನೆ ಮನೆಯವರಿಗಿಂತ ಮುಂಚೆ ಅಕ್ಕಪಕ್ಕದ ಮನೆಯವರಿಗೆ ಗೊತ್ತಾಗಿದೆ. ಕೂಡಲೇ ಜನ ಓಡಿ ಬಂದಿದ್ದಾರೆ. ಇನ್ನು ಸ್ಥಳಕ್ಕೆ ಅಗ್ನಿಶಾಮಕ ದಳ ಕರೆ ಮಾಡಿ ಮಾಹಿತಿ ತಿಳಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಇನ್ನು ಈ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸಿದ್ದಂತು ಸುಳ್ಳಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...