alex Certify ಸಿದ್ದಾರ್ಥ್ ಮಾತ್ರವಲ್ಲ, ಈ ವರ್ಷ ಹೃದಯಾಘಾತದಿಂದ ಸಾವನ್ನಪ್ಪಿದ್ದರು ಮತ್ತಿಬ್ಬರು ಕಲಾವಿದರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿದ್ದಾರ್ಥ್ ಮಾತ್ರವಲ್ಲ, ಈ ವರ್ಷ ಹೃದಯಾಘಾತದಿಂದ ಸಾವನ್ನಪ್ಪಿದ್ದರು ಮತ್ತಿಬ್ಬರು ಕಲಾವಿದರು

ನಟ, ಬಿಗ್ ಬಾಸ್ ಸೀಸನ್ 13ರ ವಿನ್ನರ್ ಸಿದ್ದಾರ್ಥ್ ಶುಕ್ಲಾ ಅವರ ಹಠಾತ್ ಸಾವು ಜನರನ್ನು ಮತ್ತೊಮ್ಮೆ ಜೀವನದ ಅನಿಶ್ಚತತೆ ಬಗ್ಗೆ ಯೋಚಿಸುವಂತೆ ಮಾಡಿದೆ.

ಸಿದ್ದಾರ್ಥ್ ಶುಕ್ಲಾ ಅವರು ತಮ್ಮ ವೃತ್ತಿ ಜೀವನವನ್ನು ಶೋಬಿಜ್ ನಲ್ಲಿ ಮಾಡೆಲ್ ಆಗುವ ಮೂಲಕ ಪ್ರಾರಂಭಿಸಿದ್ದರು. ಮತ್ತು ‘ಬಾಬುಲ್ ಕಾ ಆಂಗನ್ ಚೂಟೇ ನಾ’ ಎಂಬ ದೂರದರ್ಶನ ಕಾರ್ಯಕ್ರಮದ ಪ್ರಮುಖ ಪಾತ್ರದೊಂದಿಗೆ ನಟನಾ ರಂಗಕ್ಕೆ ಪಾದಾರ್ಪಣೆ ಮಾಡಿದರು.

ನಂತರ ಅವರು ಜಾನೆ ಪೆಹ್ವಾನೆ ಸೇ, ಯೇ ಅಜ್ನಬಿ, ಲವ್ ಯು ಜಿಂದಗಿ ನಂತಹ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು. ಆದರೆ ‘ಬಾಲಿಕಾ ವಧು’ ನಂತರ ಮನೆ ಮಾತಾದರು.

ಯುವ ನಟನ ಹಠಾತ್ ಸಾವಿಗೆ ಇಂಟರ್ನೆಟ್ ಆಘಾತ ವ್ಯಕ್ತಪಡಿಸುತ್ತಿದೆ. ಸಿದ್ದಾರ್ಥ್ ಶುಕ್ಲಾ ಮಾತ್ರವಲ್ಲ, ಈ ವರ್ಷ ಇಬ್ಬರು ನಟರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಕಿಚ್ಚ ಸುದೀಪ್ ಅಭಿಮಾನಿಗಳ ಅತಿರೇಕದ ವರ್ತನೆ, ಕೋಣ ಬಲಿ ಕೊಟ್ಟು ಕಟೌಟ್ ಗೆ ರಕ್ತಾಭಿಷೇಕ

ಈ ವರ್ಷದ ಏಪ್ರಿಲ್ ನಲ್ಲಿ ಇನ್ನೊಬ್ಬ ನಟ ಅಮಿತ್ ಮಿಸ್ತ್ರಿ ಹೃದಯಾಘಾತದಿಂದ ಮೃತಪಟ್ಟರು. ಇವರು ಹಲವಾರು ಹಿಂದಿ ಹಾಗೂ ಗುಜರಾತಿ ಚಲನಚಿತ್ರಗಳು ಹಾಗೂ ವೆಬ್ ಸಿರೀಸ್ ನಲ್ಲಿ ಪಾತ್ರ ನಿರ್ವಹಿಸಿದ್ದಾರೆ. ‘ಬಂಡೀಶ್ ಡಕಾಯಿತ್’ ವೆಬ್ ಸರಣಿಯಲ್ಲಿ ನಾಯಕನ ಚಿಕ್ಕಪ್ಪನ ಪಾತ್ರವನ್ನು ನಿರ್ವಹಿಸಿದರು.

47 ವರ್ಷದ ನಟ ಮಿಸ್ತ್ರಿ ತನ್ನ ತಾಯಿಯೊಂದಿಗೆ ಅಂಧೇರಿಯ ನಿವಾಸದಲ್ಲಿದ್ದಾಗ ಬೆಳಗ್ಗೆ 9.30ರ ವೇಳೆಗೆ ಕೊನೆಯುಸಿರೆಳೆದರು. ಆರೋಗ್ಯವಾಗಿದ್ದ ಅವರು ಬೆಳಗ್ಗೆ ಎದ್ದು, ಉಪಹಾರ ಸೇವಿಸಿದ್ದರು. ಅಲ್ಲದೆ ಹೃದಯ ಸ್ತಂಭನಕ್ಕೆ ಒಳಗಾಗುವ ಮೊದಲು ವ್ಯಾಯಾಮ ಮಾಡಿದ್ದರು. ಅವರು ಸಂಪೂರ್ಣವಾಗಿ ಫಿಟ್ ಆಗಿ ಚೆನ್ನಾಗಿದ್ದರು. ಇದು ನಮಗೆ ಆಘಾತಕಾರಿ ಸುದ್ದಿ ಎಂದು ನಟನ ಮ್ಯಾನೇಜರ್ ಹೇಳಿದ್ದರು.

ಇನ್ನೊಬ್ಬ ಅತ್ಯಂತ ಜನಪ್ರಿಯ ನಟಿ ಮತ್ತು ‘ಬಾಲಿಕಾ ವಧು’ನಲ್ಲಿ ಅಭಿನಯಿಸಿದ್ದ ಸುರೇಖಾ ಸಿಕ್ರಿ, ಈ ವರ್ಷದ ಜುಲೈನಲ್ಲಿ ಹೃದಯ ಸ್ತಂಭನದಿಂದ ನಿಧನರಾದರು.‌ ಮೂರು ಬಾರಿ ರಾಷ್ಟ್ರಪ್ರಶಸ್ತಿ ಇವರಿಗೆ ಒಲಿದು ಬಂದಿತ್ತು. ಬ್ರೈನ್ ಸ್ಟ್ರೋಕ್ ನಿಂದ ಬಳಲುತ್ತಿದ್ದ ಅವರು ಜುಲೈನಲ್ಲಿ ಹೃದಯ ಸ್ತಂಭನದಿಂದ ಮೃತರಾದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...