alex Certify SHOCKING NEWS: ಸಾಲ ತೀರಿಸಿಲ್ಲವೆಂದು ಮಹಿಳೆಯರನ್ನು ವಿವಸ್ತ್ರಗೊಳಿಸಿ ಹಲ್ಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಸಾಲ ತೀರಿಸಿಲ್ಲವೆಂದು ಮಹಿಳೆಯರನ್ನು ವಿವಸ್ತ್ರಗೊಳಿಸಿ ಹಲ್ಲೆ

ಇಬ್ಬರು ಸಹೋದರಿಯರನ್ನು ವಿವಸ್ತ್ರಗೊಳಿಸಿ ಅವರ ಮೇಲೆ ಹಲ್ಲೆ ನಡೆಸಿದಂತಹ ಅಮಾನವೀಯ ಘಟನೆಯೊಂದು ಬೆಂಗಳೂರಿನ ಸರ್ಜಾಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಈ ಘಟನೆ ಬಳಿಕ ಪೊಲೀಸರು ದೂರನ್ನು ದಾಖಲಿಸಿಕೊಳ್ಳಲು 2 ದಿನಗಳ ಕಾಲ ಕಾಯಿಸಿದ್ದಾರೆ ಎಂದು ಸಹೋದರಿಯರು ಆರೋಪಿಸಿದ್ದಾರೆ. ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಬಳಿಕ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ಆನೇಕಲ್​ ತಾಲೂಕಿನ ದೊಡ್ಡಬೊಮ್ಮಸಂದ್ರದಲ್ಲಿ ಈ ಘಟನೆ ಸಂಭವಿಸಿದೆ. ರಾಮಕೃಷ್ಣ ರೆಡ್ಡಿ, ಸುನೀಲ್​ ಕುಮಾರ್​ ಹಾಗೂ ಇಂದ್ರಮ್ಮ ಎಂಬ ಮೂವರ ವಿರುದ್ಧ ಈ ಸಂಬಂಧ ಪ್ರಕರಣ ದಾಖಲಾಗಿದೆ. ಪೊಲೀಸರು ರಾಮಕೃಷ್ಣ ರೆಡ್ಡಿ ಹಾಗೂ ಸುನೀಲ್​ ಕುಮಾರ್​​ರನ್ನು ಬಂಧಿಸಿದ್ದು, ಇಂದ್ರಮ್ಮ ಪತ್ತೆಗೆ ಬಲೆ ಬೀಸಿದ್ದಾರೆ.

ಸಹೋದರಿಯರು ನೀಡಿರುವ ದೂರಿನ ಪ್ರಕಾರ ಮಹಿಳೆಯು ದೊಡ್ಡಬೊಮ್ಮಸಂದ್ರ ಸಮೀಪದ ನೆರಿಗಾ ಗ್ರಾಮದ ನಿವಾಸಿಯಾದ ರಾಮಕೃಷ್ಣ ರೆಡ್ಡಿ ಎಂಬವರ ಬಳಿ ಮಕ್ಕಳ ಶಿಕ್ಷಣಕ್ಕೆಂದು 1 ಲಕ್ಷ ರೂಪಾಯಿ ಸಾಲವನ್ನು 30 ಪ್ರತಿಶತ ಬಡ್ಡಿದರಕ್ಕೆ ಪಡೆದುಕೊಂಡಿದ್ದರು.

ಆದರೆ ಈ ಮಹಿಳೆ ಬಳಿ ಒಂದೇ ಬಾರಿಗೆ ಪೂರ್ತಿ ಹಣವನ್ನು ಮರುಪಾವತಿ ಮಾಡುವಂತೆ ಒತ್ತಡ ಹೇರಲಾಗಿದೆ. ಜಮೀನನ್ನು ಮಾರಿ ಹಣ ಪಾವತಿ ಮಾಡುತ್ತೇನೆಂಬ ಒಪ್ಪಂದವನ್ನೂ ಇವರು ಮುರಿದಿದ್ದರು. ಆರೋಪಿಗಳು ಸಂತ್ರಸ್ತೆಯರಿದ್ದ ಮನೆಗೆ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿ ವಿವಸ್ತ್ರಗೊಳಿಸಿದ್ದಾರೆ. ಈ ಸಂಬಂಧ ಮಹಿಳೆಯರು ಸರ್ಜಾಪುರ ಠಾಣೆ ಮೆಟ್ಟಿಲೇರಿದ್ದರು. ಆದರೆ ಇನ್​ಸ್ಪೆಕ್ಟರ್​ ರಾಘವೇಂದ್ರ ಮೊದಲು ದೂರು ಸ್ವೀಕರಿಸಲು ನಿರಾಕರಿಸಿದ್ದರು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...