alex Certify SHOCKING NEWS: ಸಹೋದರರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ; ತಮ್ಮನನ್ನೇ ಕೊಂದ ಅಣ್ಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಸಹೋದರರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ; ತಮ್ಮನನ್ನೇ ಕೊಂದ ಅಣ್ಣ

ಕೋಲಾರ: ಮಳೆಯ ನೀರನ್ನು ತೋಟಕ್ಕೆ ಹರಿಯಲು ಬಿಟ್ಟ ವಿಚಾರವಾಗಿ ಅಣ್ಣ-ತಮ್ಮನ ನಡುವೆ ಜಗಳ ಆರಂಭವಾಗಿ ತಮ್ಮನನ್ನೇ ಅಣ್ಣಂದಿರು ಹತ್ಯೆಗೈದ ಘಟನೆ ಕೋಲಾರ ಜಿಲ್ಲೆಯ ಮಾಲೂರಿನ ಜಿನಗ ತಿಮ್ಮನಹಳ್ಳಿಯಲ್ಲಿ ನಡೆದಿದೆ.

56 ವರ್ಷದ ನಾಗಪ್ಪ ಕೊಲೆಯಾದ ದುರ್ದೈವಿ. ಅಣ್ಣಂದಿರಾದ ಯಲ್ಲಪ್ಪ ಹಾಗೂ ರಾಮಪ್ಪ ಕ್ಷುಲ್ಲಕ ಕಾರಣಕ್ಕಾಗಿ ಸ್ವಂತ ತಮ್ಮನನ್ನೇ ಕೊಲೆ ಮಾಡಿದ್ದಾರೆ.

ಟೊಮೆಟೋ ತೋಟಕ್ಕೆ ಮಳೆ ನೀರು ಹರಿಯಲು ಬಿಟ್ಟ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ವಾಗ್ವಾದ ಆರಂಭವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಅಣ್ಣ ತಮ್ಮಂದಿರು ಹೊಡೆದಾಡಿಕೊಂಡಿದ್ದು, ಅಣ್ಣಂದಿರು ತಮ್ಮ ನಾಗಪ್ಪನಿಗೆ ಬಲವಾಗಿ ಹೊಡೆದಿದ್ದಾರೆ. ಕುಡಿದ ಅಮಲಿನಲ್ಲಿದ್ದ ತಮ್ಮ ಅಣ್ಣಂದಿರ ಹೊಡೆತಕ್ಕೆ ಮೇಲೆಳಲಾಗದೇ ಮನೆಯಂಗಳದಲ್ಲೇ ಸಾವನ್ನಪ್ಪಿದ್ದಾನೆ.

ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...