alex Certify SHOCKING NEWS: ಮಗನಿಗೆ ಈಜು ಕಲಿಸಲು ಕೆರೆಗೆ ಧುಮುಕಿದ ತಂದೆ ನೀರುಪಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಮಗನಿಗೆ ಈಜು ಕಲಿಸಲು ಕೆರೆಗೆ ಧುಮುಕಿದ ತಂದೆ ನೀರುಪಾಲು

ರಾಯಚೂರು: ಮಗನಿಗೆ ಈಜು ಕಲಿಸಲೆಂದು ಕೆರೆಗೆ ಇಳಿದ ತಂದೆ ಮಗನ ಎದುರೇ ನೀರು ಪಾಲಾಗಿರುವ ಘಟನೆ ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಅತ್ತನೂರು ಕ್ಯಾಂಪ್ ಬಳಿ ನಡೆದಿದೆ.

38 ವರ್ಷದ ಕೆ.ಲಿಂಗಣ್ಣ ಮೃತ ವ್ಯಕ್ತಿ. ಬಿಸಿಲ ಝಳಕ್ಕೆ ಬೇಸತ್ತು ಕೆರೆಯಲ್ಲಿ ಈಜಲೆಂದು ಮಗನೊಂದಿಗೆ ಹೋಗಿದ್ದಾರೆ. ಮಗನಿಗೆ ಈಜಲು ಬರಲ್ಲವೆಂದು ಈಜು ಹೇಳಿಕೊಟ್ಟಿದ್ದಾರೆ. ಬಳಿಕ ಕೆಲ ಹೊತ್ತಲ್ಲಿ ಮಗನನ್ನು ಕೆರೆದಂಡೆಯ ಮೇಲೆ ಕೂರಿಸಿ. ತಾವೊಬ್ಬರೇ ಕೆರೆಗೆ ಧುಮುಕಿದ್ದಾರೆ. ಈ ವೇಳೆ ಅವಘಡ ಸಂಭವಿಸಿದ್ದು, ನೀರಿನಲ್ಲಿ ಮುಳುಗಿ ಲಿಂಗಣ್ಣ ಮೃತಪಟ್ಟಿದ್ದಾರೆ.

ಸಿರವಾರ‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...