alex Certify SHOCKING NEWS: ‘ಜನಪ್ರಿಯತೆ’ ಪಡೆಯಲು ನಡೆದಿತ್ತು ನಾಲ್ವರ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ‘ಜನಪ್ರಿಯತೆ’ ಪಡೆಯಲು ನಡೆದಿತ್ತು ನಾಲ್ವರ ಹತ್ಯೆ

ಯುವಕನೊಬ್ಬ ಜನಪ್ರಿಯತೆ ಪಡೆಯುವ ಸಲುವಾಗಿ ನಾಲ್ವರು ಅಮಾಯಕ ಸೆಕ್ಯೂರಿಟಿ ಗಾರ್ಡ್ ಗಳನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇದೀಗ ಪೊಲೀಸರು ಈ ಸರಣಿ ಹಂತಕನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ: ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಶಿವಪ್ರಸಾದ್ ದುರ್ವೆ ಎಂಬಾತ ವಾರದ ಹಿಂದೆ ಮೊದಲಿಗೆ ಸೆಕ್ಯೂರಿಟಿ ಗಾರ್ಡ್ ಒಬ್ಬನನ್ನು ಹತ್ಯೆ ಮಾಡಿದ್ದು, ಕೇವಲ 72 ಗಂಟೆಗಳ ಅವಧಿಯಲ್ಲಿ ಮೂರು ಕೊಲೆಗಳನ್ನು ಮಾಡಿದ್ದಾನೆ. ಕೊಲೆಯಾದವರ ಮೊಬೈಲ್ ಫೋನುಗಳನ್ನು ಈತ ಕಸಿದುಕೊಂಡಿದ್ದು, ಇದರ ಆಧಾರದ ಮೇಲೆ ಆತನನ್ನು ಬಂಧಿಸಲಾಗಿದೆ.

ಈತ ನೆಗೆಟಿವ್ ಪ್ರಚಾರ ಪಡೆಯುವ ಮನಃಸ್ಥಿತಿ ಹೊಂದಿದ್ದ ಎನ್ನಲಾಗಿದ್ದು, ಹೀಗಾಗಿಯೇ ಈ ಹತ್ಯೆಗಳನ್ನು ಮಾಡಿದ್ದಾನೆ. ಮುಂದಿನ ದಿನಗಳಲ್ಲಿ ಪೊಲೀಸರನ್ನು ಸಹ ಕೊಲೆ ಮಾಡುವ ಉದ್ದೇಶವನ್ನು ಈತ ಹೊಂದಿದ್ದ ಎಂಬ ಕಳವಳಕಾರಿ ಸಂಗತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಇದಕ್ಕೂ ಮುನ್ನ ಈತ ಇನ್ನೂ ಕೆಲವು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರಬಹುದೆಂಬ ಶಂಕೆ ಹೊಂದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...