alex Certify SHOCKING NEWS: ಗಾಳಿಪಟ ಹಾರಿಸಲು ಹೋಗಿ ಬಿಲ್ಡಿಂಗ್ ನಿಂದ ಬಿದ್ದ ಬಾಲಕ ದುರ್ಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಗಾಳಿಪಟ ಹಾರಿಸಲು ಹೋಗಿ ಬಿಲ್ಡಿಂಗ್ ನಿಂದ ಬಿದ್ದ ಬಾಲಕ ದುರ್ಮರಣ

ಬೆಳಗಾವಿ: ಗಾಳಿಪಟ ಹಾರಿಸುವಾಗ ಆಯತಪ್ಪಿ ಬಿದ್ದು ಬಾಲಕನೊಬ್ಬ ದುರ್ಮರಣವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಉಜ್ವಲ್ ನಗರದಲ್ಲಿನ ತಿರಂಗಾ ಕಾಲೋನಿಯಲ್ಲಿ ನಡೆದಿದೆ.

11 ವರ್ಷದ ಅರ್ಮಾನ್ ದಫೇದಾರ್ ಮೃತ ಬಾಲಕ. ಉಜ್ವಲ ನಗರದ ಸೆಕೆಂಡ್ ಕ್ರಾಸ್ ನಲ್ಲಿರುವ ತಿರಂಗಾ ಕಾಲೋನಿಯ ಮನೆಯಲ್ಲಿ ಬಾಲಕ ತನ್ನ ಅಣ್ಣನ ಜೊತೆ ಗಾಳಿಪಟ ಹಾರಿಸಲೆಂದು ಮನೆಯ ಟೆರೇಸ್ ಮೇಲೆ ಹೋಗಿದ್ದಾನೆ.

ಗಾಳಿಪಟ ಹಾರಿಸುವಾಗ ಕಾಲು ಜಾರಿ ಆಕಸ್ಮಿಕವಾಗಿ ಬಾಲಕ ಕೆಳಗೆ ಬಿದ್ದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...