alex Certify SHOCKING NEWS: ಆಸಿಡ್ ದಾಳಿಗೆ ಯುವತಿಯೇ ಕಾರಣ, ತಂದೆಗೆ ಹೇಳಿದ್ದಕ್ಕೆ ಆಸಿಡ್ ಹಾಕಿದ್ದೇನೆ ಎಂದ ಆರೋಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಆಸಿಡ್ ದಾಳಿಗೆ ಯುವತಿಯೇ ಕಾರಣ, ತಂದೆಗೆ ಹೇಳಿದ್ದಕ್ಕೆ ಆಸಿಡ್ ಹಾಕಿದ್ದೇನೆ ಎಂದ ಆರೋಪಿ

ಬೆಂಗಳೂರು: ಬೆಂಗಳೂರು ಯುವತಿ ಮೇಲೆ ಆಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ನಾಗೇಶ್ ಪೊಲೀಸ್ ವಿಚಾರಣೆ ವೇಳೆ ಆಸಿಡ್ ದಾಳಿಗೆ ಯುವತಿಯೇ ಕಾರಣ ಎಂದು ಹೇಳಿದ್ದಾನೆ.

ಯುವತಿಯ ಮೇಲೆ ಆಸಿಡ್ ಹಾಕುವ ಉದ್ದೇಶ ಇರಲಿಲ್ಲ. ತನ್ನನ್ನು ಮದುವೆಯಾಗುವಂತೆ ಕೇಳಿದ್ದೆ. ಅದಕ್ಕೆ ಒಪ್ಪುತ್ತಿರಲಿಲ್ಲ. ಘಟನೆ ಹಿಂದಿನ ದಿನ ಆಸಿಡ್ ಹಾಕುವುದಾಗಿ ಹೆದರಿಸಿದ್ದೆ. ಆದರೆ ಯುವತಿ ಈ ವಿಷಯವನ್ನು ತನ್ನ ತಂದೆಗೆ ಹೇಳಿದ್ದಳು. ಬಳಿಕ ಆಕೆಯ ತಂದೆ ನನ್ನ ಅಣ್ಣನಿಗೆ ಹೇಳಿದ್ದಾರೆ. ಆಸಿಡ್ ಹಾಕ್ತೀಯಾ ಎಂದು ನನ್ನ ಅಣ್ಣ ಬಾಯಿಗೆ ಬಂದಂತೆ ನನ್ನ ಬೈದಿದ್ದ. ಇದಕ್ಕೆ ಆಸಿಡ್ ಹಾಕಿಯೇ ಬಿಡೋಣ ಎಂದು ನಿರ್ಧರಿಸಿ ಅಂದು ಬೆಳಿಗ್ಗೆ ಆಸಿಡ್ ಎರಚಿ ಪರಾರಿಯಾದೆ ಎಂದಿದ್ದಾನೆ.

ಇನ್ನು ಆಸಿಡ್ ದಾಳಿ ಬಳಿಕ ಕೋರ್ಟ್ ಬಳಿ ಬಂದಿದ್ದ ಆರೋಪಿ ಅಲ್ಲಿ ಬೈಕ್ ಬಿಟ್ಟು ಆಟೋದಲ್ಲಿ ಹೊಸಕೋಟೆ ಬಳಿ ಹೋಗಿದ್ದಾನಂತೆ ಅಲ್ಲಿಯೇ ಒಂದು ಕೆರೆ ಕಂಡಿದ್ದು, ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದನಂತೆ. ಆದರೆ ಬೇಡವೆಂದೆನಿಸಿ ತಿರುಪತಿಗೆ ಹೋಗಿ ಪ್ರಾಯಶ್ಚಿತ್ತ ಮಾಡಿಕೊಳ್ಳೋಣ ಎಂದು ಮಾಲೂರು ಬಸ್ ಹತ್ತಿದ್ದನಂತೆ. ಆದರೆ ಮಾರ್ಗ ಮಧ್ಯೆ ಬೇಡ ಎಂದೆನಿಸಿ ಬಸ್ ಇಳಿದು ಕೃಷ್ಣಗಿರಿ ಬಸ್ ಹತ್ತಿ ತಿರುವಣ್ಣಾಮಲೈಗೆ ತೆರಳಿದ್ದನಂತೆ ಈ ಬಗ್ಗೆ ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...