alex Certify SHOCKING NEWS: ಅಪ್ಪನಿಂದಲೇ ಮಗನ ಮೇಲೆ ಗುಂಡಿನ ದಾಳಿ; ಫಲಕಾರಿಯಾಗದ ಚಿಕಿತ್ಸೆ; ನರಳಿ ನರಳಿ ಪ್ರಾಣ ಬಿಟ್ಟ ಬಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಅಪ್ಪನಿಂದಲೇ ಮಗನ ಮೇಲೆ ಗುಂಡಿನ ದಾಳಿ; ಫಲಕಾರಿಯಾಗದ ಚಿಕಿತ್ಸೆ; ನರಳಿ ನರಳಿ ಪ್ರಾಣ ಬಿಟ್ಟ ಬಾಲಕ

ಮಂಗಳೂರು: ತಂದೆಯಿಂದಲೇ ಮಗನ ಮೇಲೆ ಗುಂಡಿನ ದಾಳಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರವಾಗಿ ಗಾಯಗೊಂಡಿದ್ದ 14 ವರ್ಷದ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ.

ಅಕ್ಟೋಬರ್ 5ರಂದು ಮಂಗಳೂರಿನ ಮಾರ್ಗನ್ಸ್ ಗೇಟ್ಸ್ ಸಮೀಪ ತಂದೆ ರಾಜೇಶ್ ಪ್ರಭುನಿಂದ ಕೆಲಸದ ಸಿಬ್ಬಂದಿಗಳಿಗೆ ಗುರಿಯಿಟ್ಟು ನಡೆಸಿದ್ದ ಫೈರಿಂಗ್ ನಲ್ಲಿ ಗುರಿತಪ್ಪಿ ರಾಜೇಶ್ ಮಗ 14 ವರ್ಷದ ಸುಧೀಂದ್ರ ಮೇಲೆ ಬಿದ್ದಿತ್ತು. ಸುಧೀಂದ್ರ ತಲೆಗೆ ಗಂಭೀರವಾಗಿ ಗಾಯಗಳಾಗಿದ್ದವು. ತಕ್ಷಣ ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

BIG NEWS: IT ದಾಳಿ ಬೆನ್ನಲ್ಲೇ BSY ಆಪ್ತ ಉಮೇಶ್ ಗೆ ರಾಜ್ಯ ಸರ್ಕಾರದಿಂದಲೂ ಬಿಗ್ ಶಾಕ್

ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸುಧೀಂದ್ರ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾನೆ. ವೇತನ ವಿಚಾರವಾಗಿ ಕೆಲಸದ ಸಿಬ್ಬಂದಿಗಳು ಮಾಲೀಕ ರಾಜೇಶ್ ಪ್ರಭು ಬಳಿ ಜಗಳ ಮಾಡಿದ್ದರು. ಈ ವೇಳೆ ರಾಜೇಶ್ ಕೈಲಿದ್ದ ರಿವಾಲ್ವರ್ ನಿಂದ ಅಚಾನಕ್ ಆಗಿ ಹಾರಿದ ಗುಂಡು ಆತನ ಮಗನಿಗೆ ತಗುಲಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...