alex Certify ಖಾಲಿ ಕುರ್ಚಿ ಮರೆಮಾಚಲು ಭದ್ರತಾಲೋಪದ ಆರೋಪ, ಬಿಜೆಪಿ ವಿರುದ್ಧ ಸಿಧು ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಲಿ ಕುರ್ಚಿ ಮರೆಮಾಚಲು ಭದ್ರತಾಲೋಪದ ಆರೋಪ, ಬಿಜೆಪಿ ವಿರುದ್ಧ ಸಿಧು ವಾಗ್ದಾಳಿ

ಪಂಜಾಬ್ ನಲ್ಲಾದ ಘಟನೆ ಬಗ್ಗೆ ವಾದ – ವಾಗ್ವಾದ ಮುಂದುವರೆದಿದೆ. ಭದ್ರತಾಲೋಪಕ್ಕೆ ಪಂಜಾಬ್ ಕಾಂಗ್ರೆಸ್ ಸರ್ಕಾರವನ್ನೆ ಹೊಣೆಯಾಗಿಸಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ.

ಇತ್ತ ಕಾಂಗ್ರೆಸ್ ನಾಯಕರು ಸಹ ಬಿಜೆಪಿ ತನ್ನ ವಿಫಲತೆಯ್ನ ಮುಚ್ಚಿಕೊಳ್ಳುವ ಉದ್ದೇಶಪೂರ್ವಕವಾಗಿ ಭದ್ರತಾಲೋಪದ ಕಾರಣ ಒಡ್ಡುತ್ತಿದೆ ಎಂದು ಆರೋಪಿಸುತ್ತಿದ್ದಾರೆ.

ಪಂಜಾಬ್ ನ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು, ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಟ್ಟ ಸಂದರ್ಭದಲ್ಲಿ ಭದ್ರತಾ ಉಲ್ಲಂಘನೆಯಾಗಿಲ್ಲ ಎಂದು ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಹೇಳಿಕೆಯನ್ನೆ ಪ್ರತಿಧ್ವನಿಸಿದ್ದಾರೆ.

ಫಿರೋಜ್ ಪುರ ಸಭೆಯಲ್ಲಿ ಕುರ್ಚಿಗಳು ಖಾಲಿ ಇದ್ದವು ಅನ್ನೋದನ್ನ ಗಮನಿಸಬೇಕು. ರೈತರು ವರ್ಷಗಟ್ಟಲೆ ದೆಹಲಿ ಗಡಿಯಲ್ಲಿ ಕಾದು ಕುಳಿತಿದ್ದರು. ಆದರೆ niನ್ನೆ ಪ್ರಧಾನಿ ಮೋದಿ ಕೇವಲ 15-20 ನಿಮಿಷ ಕಾದಿದ್ದಕ್ಕೆ ಅವರಿಗೆ ತೊಂದರೆಯಾಗಿದೆ. ರೈತರಿಗೊಂದು ಕಾನೂನು ನಿಮಗೊಂದು ಕಾನೂನು, ರೈತರಿಗೊಂದು ನಿಯಮ ನಿಮಗೊಂದು ನಿಯಮ ಇದೆಂತಾ ಯೋಚನೆ ಪ್ರಧಾನಿಯವರೆ ಎಂದು ಪ್ರಶ್ನಿಸಿದ್ದಾರೆ.

ಜೊತೆಗೆ ನೀವು ರೈತರ ಆದಾಯವನ್ನ ದ್ವಿಗುಣ ಮಾಡುತ್ತೇವೆ ಎಂದು ಭರವಸೆ ನೀಡಿದ್ರಿ, ಆದ್ರೆ ಈಗ ಆಗಿರುವುದೇನು ಅವರ ಬಳಿ ಇರುವುದನ್ನು ಕಸಿದು ಕೊಂಡಿದ್ದಿರಾ ಎಂದು ಸಿಧು ಆಕ್ರೋಶ ಹೊರಹಾಕಿದ್ದಾರೆ.

— Punjab Congress (@INCPunjab) January 6, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...