ಗೋವಾ: ಸ್ಯಾಂಡಲ್ ವುಡ್ ನ ʼಮೈನಾʼ ಹಾಗೂ 2013ರ ಬಾಲಿವುಡ್ ಹಿಟ್ “ಚೆನ್ನೈ ಎಕ್ಸ್ಪ್ರೆಸ್”ನ ದೂಧ್ಸಾಗರ್ನ ಸಾಂಪ್ರದಾಯಿಕ ದೃಶ್ಯ ನೆನಪಿದೆಯಾ ? ನಾರ್ವೇಯನ್ ರಾಜತಾಂತ್ರಿಕ ಮತ್ತು ಮಾಜಿ ರಾಜಕಾರಣಿ ಎರಿಕ್ ಸೋಲ್ಹೈಮ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಅದರ ಸೌಂದರ್ಯವನ್ನು ಹಂಚಿಕೊಂಡಿದ್ದಾರೆ.
ನಾರ್ವೆಯ ಹವಾಮಾನ ಮತ್ತು ಪರಿಸರ ಖಾತೆಯ ಮಾಜಿ ಸಚಿವರು ಆಗಾಗ್ಗೆ ಭಾರತದ ಅತ್ಯಂತ ಸುಂದರವಾದ ಪ್ರವಾಸಿ ತಾಣಗಳ ನೋಟವನ್ನು ಹಂಚಿಕೊಳ್ಳುತ್ತಾರೆ, ಈ ಬಾರಿ ಗೋವಾದ ಅತ್ಯಂತ ಸುಂದರ ದೂಧ್ಸಾಗರ್ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಇದು ವೈಮಾನಿಕ ನೋಟವಾಗಿದೆ.
ಗೋವಾಕ್ಕೆ ರೈಲಿನಲ್ಲಿ ಹೋಗುತ್ತಿದ್ದರೆ ಈ ಸುಂದರ ದೃಶ್ಯವನ್ನು ಆನಂದಿಸಬಹುದು. “ಇನ್ಕ್ರೆಡಿಬಲ್ ಇಂಡಿಯಾ! ಭಗವಾನ್ ಮಹಾವೀರ್ ವನ್ಯಜೀವಿ ಅಭಯಾರಣ್ಯದ ಒಳಭಾಗದಲ್ಲಿ, ಗೋವಾ-ಕರ್ನಾಟಕ ಗಡಿಯನ್ನು ದಾಟಿ, ಮಾಂಡೋವಿ ನದಿಯು ದೂಧಸಾಗರ್ ಜಲಪಾತವಾಗಿ ಬಂಡೆಯಿಂದ ಧುಮುಕುತ್ತದೆ, ಇದು ಹಾಲಿನ ಸಾಗರ” ಎಂದು ಎರಿಕ್ ಶೀರ್ಷಿಕೆ ಕೊಟ್ಟಿದ್ದಾರೆ.