alex Certify ಮೀನುಗಾರನ ಮಾಧ್ಯಮ ಸಂದರ್ಶನಕ್ಕೆ ಅಡ್ಡಿಯಾದ ಕಡಲಸಿಂಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನುಗಾರನ ಮಾಧ್ಯಮ ಸಂದರ್ಶನಕ್ಕೆ ಅಡ್ಡಿಯಾದ ಕಡಲಸಿಂಹ

ಚಿಲಿಯ ಮೀನುಗಾರರೊಬ್ಬರು ಮಾಧ್ಯಮವೊಂದಕ್ಕೆ ಸಂದರ್ಶನ ಕೊಡುತ್ತಿದ್ದ ವೇಳೆ ಅಡ್ಡ ಬಂದ ಕಡಲಸಿಂಹವೊಂದು ಭಾರೀ ಸುದ್ದಿಯಲ್ಲಿದೆ.

ಚಿಲಿಯ ಟೋಮ್‌ನ ಕಡಲತೀರದಲ್ಲಿ ನೂರಾರು ಕಡಲಸಿಂಹಗಳು ಸೇರಿಕೊಂಡಿದ್ದು, ಈ ಬಗ್ಗೆ ಮೀನುಗಾರರೊಬ್ಬರು ಮಾಧ್ಯಮಕ್ಕೆ ವಿಶ್ಲೇಷಣೆ ನೀಡುತ್ತಿದ್ದರು.

ಕ್ರಿಕೆಟ್ ಅಭಿಮಾನಿಗಳಿಗೆ ಬೇಸರದ ಸಂಗತಿ: ಕೈತಪ್ಪಿ ಹೋಯ್ತು ಟಿ-20 ವಿಶ್ವಕಪ್ ಆತಿಥ್ಯ

ಸಂದರ್ಶನದ ವೇಳೆ, ಕಡಲಸಿಂಹಗಳ ಈ ಆಗಮನವನ್ನು ’ಪ್ಲೇಗ್’ ಎಂದು ಮೀನುಗಾರ ಹೇಳುತ್ತಲೇ ಆತನ ಹಿಂದಿನಿಂದ ಗೇಟ್‌ ತೆರೆದುಕೊಂಡು ನುಗ್ಗಿದ ಕಡಲಸಿಂಹ ಸಂದರ್ಶನಕ್ಕೆ ಬ್ರೇಕ್ ಹಾಕಿದೆ. ಸರಿಯಾದ ಸಮಯದಲ್ಲಿ ಕಡಲಸಿಂಹವನ್ನು ಕಂಡ ಮೀನುಗಾರ ಕೂಡಲೇ ಪಕ್ಕಕ್ಕೆ ಸರಿದಿದ್ದಾರೆ.

ಮನೆಗೆ ಬಂದ ಸೊಸೆ ನೋಡಿ ಮೂರ್ಛೆ ಹೋದ್ಲು ಅತ್ತೆ….!

ಕಳೆದ ಮೂರು ದಶಕಗಳಿಂದ ಕಡಲಸಿಂಹಗಳ ಜನಸಂಖ್ಯೆ ನಿಯಂತ್ರಣಕ್ಕೆ ತಾರದೇ ಇರುವ ಕಾರಣ ಹೀಗೆ ಆಗಿದೆ ಎಂದು ಆ ಮೀನುಗಾರ ಸ್ಥಳೀಯಾಡಳಿತದ ಮೇಲೆ ಆರೋಪ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...