alex Certify ನಾಗಚೈತನ್ಯರಿಂದ ಬೇರ್ಪಟ್ಟ ಬಳಿಕ ಇಂಟ್ರಸ್ಟಿಂಗ್‌ ಪೋಸ್ಟ್‌ ಹಾಕಿದ ಸಮಂತಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಗಚೈತನ್ಯರಿಂದ ಬೇರ್ಪಟ್ಟ ಬಳಿಕ ಇಂಟ್ರಸ್ಟಿಂಗ್‌ ಪೋಸ್ಟ್‌ ಹಾಕಿದ ಸಮಂತಾ

’ಚೇಯ್‌ಸ್ಯಾಮ್‌’ ಎಂದೇ ಖ್ಯಾತವಾಗಿದ್ದ ತೆಲುಗು ಸಿನಿಮಾ ರಂಗದ ತಾರಾ ದಂಪತಿ ನಾಗಚೈತನ್ಯ ಮತ್ತು ಸಮಂತಾ ಅಧಿಕೃತವಾಗಿ ಬೇರೆಯಾಗುತ್ತಿರುವುದನ್ನು ಘೋಷಿಸಿಕೊಂಡಿದ್ದಾರೆ. ಅವರ ವಿವಾಹ ಮುರಿದುಬಿದ್ದಿರುವ ಬಗ್ಗೆ ಖಾತ್ರಿಪಡಿಸಿದ್ದಾರೆ. ನಟ ನಾಗಚೈತನ್ಯ ಅವರ ತಂದೆ, ಹಿರಿಯ ನಟ ನಾಗಾರ್ಜುನ ಕೂಡ ತಮ್ಮ ಮಗನ ದಾಂಪತ್ಯದ ಬಿರುಕಿಗೆ ಭಾರಿ ಬೇಸರ ವ್ಯಕ್ತಪಡಿಸಿ ಆಗಿದೆ. ಚೈತನ್ಯ ಅವರ ಮನೆ ತೊರೆದು ಬೇರೆ ಮನೆಯಲ್ಲಿ ವಾಸ ಮಾಡುತ್ತಿರುವ ಸಮಂತಾ ಸದ್ಯಕ್ಕೆ ಸಿನಿಮಾ ಶೂಟಿಂಗ್‌ನಿಂದ ಬಿಡುವು ಪಡೆದುಕೊಂಡು ಚಾರ್‌ಧಾಮ್‌ ಯಾತ್ರೆಗೆ ತೆರಳಿದ್ದು, ಬಹಳ ಗಮನಸೆಳೆದಿತ್ತು.

ಇಂಥ ಸಣ್ಣವಯಸ್ಸಿನಲ್ಲಿ ಧಾರ್ಮಿಕ ಯಾತ್ರೆ ಕೈಗೊಳ್ಳುವಷ್ಟು ವೈರಾಗ್ಯ, ವಿಚ್ಛೇದನದ ನಿರ್ಧಾರವು ತಂದುಬಿಟ್ಟಿತೇ ಎಂದು ಹಲವು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದರು. ಆದರೆ, ಇವೆಲ್ಲಕ್ಕೂ ಪ್ರತ್ಯುತ್ತರವನ್ನು ಇತ್ತೀಚೆಗೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಟಿ ಸಮಂತಾ ಕೊಟ್ಟಿದ್ದಾರೆ.

OMG: ಮದುವೆ ಸಮಾರಂಭಗಳಿಗೆ ಬಾಡಿಗೆಗೆ ಸಿಕ್ತಾರೆ ಸಂಬಂಧಿಕರು..!

’’ನಾನು ಬಲಿಷ್ಠೆ, ನಾನು ನನ್ನೊಳಗೆ ಪರ್ಫೆಕ್ಟ್ ಇದ್ದೇನೆ, ನಾನು ಎಂದಿಗೂ ಸೋಲಲ್ಲ, ಜಗ್ಗಲ್ಲ, ಕುಗ್ಗಲ್ಲ. ನಾನು ಪ್ರೀತಿಸುತ್ತಲೇ ಇರುತ್ತೇನೆ, ನಾನು ಮನುಷ್ಯಳು ಜತೆಗೆ ಯೋಧನ ಗುಣ ಇರುವವಳು,’’ ಎಂದು ಬರೆದುಕೊಂಡಿದ್ದಾರೆ. ಅಲ್ಲಿಗೆ ಹೊಸ ಜೀವನವನ್ನು ಸ್ಫೂರ್ತಿದಾಯಕವಾಗಿ ಆರಂಭಿಸುತ್ತಿರುವ ಸುಳಿವನ್ನು ಸಮಂತಾ ಕೊಟ್ಟಿದ್ದಾರೆ.

ಅಂದಹಾಗೇ, ಇಷ್ಟೆಲ್ಲ ಸ್ಫೂರ್ತಿದಾಯಕ, ಚೈತನ್ಯಭರಿತ ಮಾತುಗಳನ್ನು ಆಡಿರುವ ಸಮಂತಾ ಅವರಿಗೆ ಈ ಮಾತುಗಳನ್ನು ಅವರ ಮನಸ್ಸಿಗೆ ಇಳಿಸಿದ್ದು ಆಕೆಯ ತಾಯಿ ಅವರಂತೆ. ‘ಮಮ್ಮಾ ಸೆಡ್‌ ‘ ಎಂದು ಅವರೇ ಬರೆದುಕೊಂಡಿದ್ದಾರೆ. ಚಾರ್‌ಧಾಮ್‌ ಯಾತ್ರೆಯ ಬಳಿಕ ಸಮಂತಾ ಅವರು ದುಬೈಗೆ ತೆರಳಿ, ಮನಸ್ಸು ಹಗುರ ಮಾಡಿಕೊಂಡಿದ್ದಾರೆ. ಇವೆಲ್ಲದರ ಅಪ್‌ಡೇಟ್‌ಗಳನ್ನು ಅವರು ಫೋಟೊಗಳ ಮೂಲಕ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಿದ್ದಾರೆ.

sam

https://

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...