alex Certify RPF ಪೇದೆ ಸಮಯಪ್ರಜ್ಞೆಗೆ ಉಳಿಯಿತು ಪ್ರಯಾಣಿಕನ ಜೀವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

RPF ಪೇದೆ ಸಮಯಪ್ರಜ್ಞೆಗೆ ಉಳಿಯಿತು ಪ್ರಯಾಣಿಕನ ಜೀವ

ಚಲಿಸುತ್ತಿರುವ ರೈಲೊಂದನ್ನು ಏರಲು ಹೋಗಿ ಆಯತಪ್ಪಿದ ವ್ಯಕ್ತಿಯೊಬ್ಬ ರೈಲ್ವೇ ಪೊಲೀಸ್‌ ಪೇದೆಯ ಸಮಯಪ್ರಜ್ಞೆಯಿಂದ ಬದುಕುಳಿದಿದ್ದಾರೆ.

ಮಹಾರಾಷ್ಟ್ರದ ವಸಾಯ್ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ಜರುಗಿದೆ. ಚಲಿಸುತ್ತಿರುವ ರೈಲಿಗೆ ಏರಲು ಯತ್ನಿಸಿದ ಪ್ರಯಾಣಿಕ ಆಯತಪ್ಪಿ ಇನ್ನೇನು ರೈಲು ಮತ್ತು ಪ್ಲಾಟ್‌ಫಾರಂ ಸಂದಿಯಲ್ಲಿ ಹಳಿಗಳ ಮೇಲೆ ಜಾರಿ ಬೀಳಲಿದ್ದರು. ಅಲ್ಲೇ ನಿಂತಿದ್ದ ಆರ್‌ಪಿಎಫ್ ಪೇದೆಯೊಬ್ಬರು ತಕ್ಷಣ ಓಡಿ ಬಂದು ಆತನನ್ನು ಕೈ ಹಿಡಿದು ಮೇಲೆತ್ತಿ ಪ್ಲಾಟ್‌ಫಾರಂ ಮೇಲೆ ಸುರಕ್ಷಿತವಾಗಿ ಎಳೆದುಕೊಂಡಿದ್ದಾರೆ.

ಗುಜರಿಯಿಂದ ಕಾರು ತಯಾರಿಸಿದವನಿಗೆ ಆನಂದ್‌ ಮಹೀಂದ್ರಾರಿಂದ ಬಂಪರ್‌ ಗಿಫ್ಟ್

ಘಟನೆಯ ಸಿಸಿ ಟಿವಿ ದೃಶ್ಯವಾಗಳಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು, 5.5 ಸಾವಿರ ಬಾರಿ ವೀಕ್ಷಣೆಗೆ ಒಳಗಾಗಿದೆ.

ಇಂಥದ್ದೇ ಮತ್ತೊಂದು ಘಟನೆಯಲ್ಲಿ ನಾಗ್ಪುರ ರೈಲ್ವೇ ನಿಲ್ದಾಣದಲ್ಲಿ ಚಲಿಸುತ್ತಿರುವ ರೈಲು ಏರಲು ಯತ್ನಿಸಿ ಜಾರಿ ಬೀಳಲಿದ್ದ ಮಹಿಳಾ ಪ್ರಯಾಣಿಕರೊಬ್ಬರನ್ನು ಆರ್‌ಪಿಎಫ್‌ನ ಮತ್ತೊಬ್ಬ ಪೇದೆ ಕಾಪಾಡಿದ್ದಾರೆ. ಆರ್‌ಪಿಎಫ್ ಪೇದೆ ನಾರ್ಪಾಲ್ ಸಿಂಗ್ ಮಹಿಳೆಯರನ್ನು ಸುರಕ್ಷಿತವಾಗಿ ಪ್ಲಾಟ್‌ಫಾರಂಗೆ ಎಳೆದುಕೊಳ್ಳುತ್ತಿರುವ ಸಿಸಿ ಟಿವಿ ದೃಶ್ಯಾವಳಿ ವೈರಲ್‌ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...