alex Certify ಶಾಕಿಂಗ್..! ಅಡಕೆ ಮಾರಾಟ ಮಾಡಿ ಬರುವಾಗ ವ್ಯಾಪಾರಿ ಅಡ್ಡಗಟ್ಟಿ ಹಣ, ಚಿನ್ನ ಲೂಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್..! ಅಡಕೆ ಮಾರಾಟ ಮಾಡಿ ಬರುವಾಗ ವ್ಯಾಪಾರಿ ಅಡ್ಡಗಟ್ಟಿ ಹಣ, ಚಿನ್ನ ಲೂಟಿ

ಬೆಂಗಳೂರು: ಅಡಿಕೆ ವ್ಯಾಪಾರಿ ಅಡ್ಡಗಟ್ಟಿ 5 ಲಕ್ಷ ರೂ., ಚಿನ್ನದಸರ ದರೋಡೆ ಮಾಡಿದ ಘಟನೆ ನೆಲಮಂಗಲ ತಾಲ್ಲೂಕಿನ ಹಳೆನಿಜಗಲ್ ಗ್ರಾಮದ ಸಮೀಪ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಹಳೆನಿಜಗಲ್ ಬಳಿ ತಮಿಳುನಾಡು ಮೂಲದ ಮಣಿಕಂಠನ್(51) ಅವರ ಬಳಿ ದರೋಡೆ ನಡೆಸಲಾಗಿದೆ. ತುಮಕೂರಿನಲ್ಲಿ ಅಡಿಕೆ ಮಾರಾಟ ಮಾಡಿ ಬರುತ್ತಿದ್ದಾಗ ಕಾರು ಅಡ್ಡಗಟ್ಟಿ ಬೆದರಿಸಿದ ದುಷ್ಕರ್ಮಿಗಳು ಕೃತ್ಯವೆಸಗಿದ್ದಾರೆ. ಕಾರು ಮತ್ತು ಬೈಕ್ ನಲ್ಲಿ ಬಂದು ವ್ಯಾಪಾರಿಯ ಕಾರು ಅಡ್ಡಗಟ್ಟಿ ದರೋಡೆ ನಡೆಸಲಾಗಿದ್ದು, ದಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...