alex Certify ಉತ್ತರಾಖಾಂಡ‌ ಸರ್ಕಾರದ ಪ್ರಚಾರ ರಾಯಭಾರಿಯಾದ ರಿಶಬ್ ಪಂತ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತರಾಖಾಂಡ‌ ಸರ್ಕಾರದ ಪ್ರಚಾರ ರಾಯಭಾರಿಯಾದ ರಿಶಬ್ ಪಂತ್‌

ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್‌ ರಿಶಬ್ ಪಂತ್‌ರನ್ನು ಉತ್ತರಾಖಂಡ ಸರ್ಕಾರದ ಪ್ರಚಾರ ರಾಯಭಾರಿಯಾಗಿ ರಾಜ್ಯದ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್ ಧಾಮಿ ಘೋಷಿಸಿದ್ದಾರೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಘೋಷಣೆ ಮಾಡಿದ ಸಿಎಂ, “ಭಾರತ ತಂಡದ ಉತ್ತಮ ಆಟಗಾರರಲ್ಲಿ ಒಬ್ಬರು, ಯುವಕರ ಕಣ್ಮಣಿ ಮತ್ತು ಉತ್ತರಾಖಂಡದ ಪುತ್ರ, ರಿಶಬ್ ಪಂತ್‌‌ರನ್ನು ’ರಾಜ್ಯದ ಬ್ರಾಂಡ್ ರಾಯಭಾರಿ’ಯಾಗಿ ನಮ್ಮ ಸರ್ಕಾರ ನೇಮಕ ಮಾಡುತ್ತಿದ್ದು, ರಾಜ್ಯದ ಯುವಕರು ಕ್ರೀಡೆ ಮತ್ತು ಸಾರ್ವಜನಿಕ ಆರೋಗ್ಯವನ್ನು ಗಂಭೀರವಾಗಿ ತೆಗೆದುಕೊಳ್ಳಲು ಈ ಮೂಲಕ ಆಶಿಸುತ್ತೇವೆ,” ಎಂದಿದ್ದಾರೆ.

BIG NEWS: ಕನ್ನಡ ಪರ ಸಂಘಟನೆ ಕಾರ್ಯಕರ್ತರು ಪೊಲೀಸರ ವಶಕ್ಕೆ; ಕರ್ನಾಟಕವೇ ಬಂದ್ ಆಗುತ್ತೆ ಹುಷಾರ್…! ಎಚ್ಚರಿಕೆ ನೀಡಿದ ಪ್ರವೀಣ್ ಶಟ್ಟಿ

ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿದ ಪಂತ್‌, “ಧನ್ಯವಾದಗಳು @pushkardhami ಸರ್‌ ನನಗೆ ಪ್ರಚಾರ ರಾಯಭಾರಿಯಾಗಿ ಕ್ರೀಡೆ ಮತ್ತು ಸಾರ್ವಜನಿಕ ಆರೋಗ್ಯಗಳಲ್ಲಿ ಉತ್ತರಾಖಂಡದ ಜನತೆಯನ್ನು ಉತ್ತೇಜಿಸುವ ಅವಕಾಶ ನೀಡಿದ್ದಕ್ಕೆ. ಆರೋಗ್ಯಯುತ ಭಾರತದೆಡೆಗೆ ನೀವು ತೆಗೆದುಕೊಂಡಿರುವ ಈ ಹೆಜ್ಜೆ ನನಗೆ ಸಂತಸ ತಂದಿದ್ದು, ಈ ಸಂದೇಶವನ್ನು ಹರಡಲು ನಾನು ನನ್ನ ಕೈಲಾದ ಅತ್ಯುತ್ತಮ ಪ್ರಯತ್ನ ಮಾಡುತ್ತೇನೆ,” ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...