alex Certify ರಾಜ್ಯದಲ್ಲಿರೋದು ಗಾಂಧಿ ಕಾಂಗ್ರೆಸ್​ ಅಲ್ಲ, ಡುಪ್ಲಿಕೇಟ್​ ಕಾಂಗ್ರೆಸ್​​; ಹೆಚ್​.ಡಿ. ರೇವಣ್ಣ ಕಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲಿರೋದು ಗಾಂಧಿ ಕಾಂಗ್ರೆಸ್​ ಅಲ್ಲ, ಡುಪ್ಲಿಕೇಟ್​ ಕಾಂಗ್ರೆಸ್​​; ಹೆಚ್​.ಡಿ. ರೇವಣ್ಣ ಕಿಡಿ

ರಾಜ್ಯದಲ್ಲಿ ಈಗ ಗಾಂಧಿ ಕಾಂಗ್ರೆಸ್​ ಇಲ್ಲ. ಡುಪ್ಲಿಕೇಟ್​ ಕಾಂಗ್ರೆಸ್​ ಇದೆ ಎಂದು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಮಾಜಿ ಸಚಿವ ಹೆಚ್​.ಡಿ. ರೇವಣ್ಣ ಕಿಡಿಕಾರಿದ್ದಾರೆ.

180 ಸೀಟು ಹೊಂದಿದ್ದ ಕಾಂಗ್ರೆಸ್​​ 60-40ಕ್ಕೆ ಕುಸಿದಿದೆ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಕಾಂಗ್ರೆಸ್​ ಠೇವಣಿ ಕೂಡ ಉಳಿಸಿಕೊಂಡಿಲ್ಲ. ಹೀಗಾಗಿ ಇದೊಂದು ಡುಪ್ಲಿಕೇಟ್​​ ಕಾಂಗ್ರೆಸ್​​ ಎಂದು ರೇವಣ್ಣ ವ್ಯಂಗ್ಯವಾಡಿದ್ದಾರೆ.

ಬಾಲ್ಕನಿಯಲ್ಲಿ ನಿಂತ ವಧುವಿನಿಂದ ವರನಿಗೆ ಫ್ಲೈಯಿಂಗ್ ಕಿಸ್ ಸ್ವಾಗತ – ವಿಡಿಯೋ ವೈರಲ್

ಇದೇ ವೇಳೆ ಆರ್​ಎಸ್​ಎಸ್​​ ವಿಚಾರವಾಗಿಯೂ ಮಾತನಾಡಿದ ಅವರು, ಆರ್​ಎಸ್​ಎಸ್​ ಬಗ್ಗೆ ನನಗೆ ಏನೂ ಗೊತ್ತಿಲ್ಲಪ್ಪ. ಬೆಳಗ್ಗೆ ಎದ್ದ ಕೂಡಲೇ ರಾಗಿ ಮುದ್ದೆ ತಿನ್ನೋದು ಮಾತ್ರ ನನಗೆ ಗೊತ್ತು. ಜನರ ಸೇವೆ ಮಾಡೋದು ಅಷ್ಟೇ ನನಗೆ ಗೊತ್ತಿದೆ ಎಂದು ಹೇಳಿದ್ರು.

ದಶಮಿ ಹಬ್ಬದ ಪ್ರಯುಕ್ತ ಪೊಲೀಸ್​ ಠಾಣೆ ಕೇಸರಿಮಯವಾಗಿದ್ದರ ಬಗ್ಗೆ ಸಿದ್ದರಾಮಯ್ಯ ಕಿಡಿಕಾರಿದ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರೋದಕ್ಕೆ ಕಾಂಗ್ರೆಸ್​ನವರೇ ಕಾರಣ. ಈ ಕೇಸರಿಮಯಕ್ಕೂ ಕಾಂಗ್ರೆಸ್ಸಿಗರೇ ಕಾರಣ. ತುಮಕೂರಿನಲ್ಲಿ ದೇವೇಗೌಡರನ್ನು ಸೋಲಿಸಲು ಕಷ್ಟ ಪಟ್ಟಿದ್ದು ಯಾರು..? ಎಂದು ಪ್ರಶ್ನೆ ಮಾಡಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...