alex Certify ನೋ ವ್ಯಾಕ್ಸಿನ್, ನೋ ರೇಷನ್ ಗೆ ಬ್ರೇಕ್: ಲಸಿಕೆ ಪಡೆಯದವರಿಗೂ ಪಿಂಚಣಿ, ಪಡಿತರ – ಯಾವುದೇ ಯೋಜನೆಗೆ ಲಸಿಕೆ ಜೋಡಿಸಿಲ್ಲವೆಂದು CS ಸ್ಪಷ್ಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋ ವ್ಯಾಕ್ಸಿನ್, ನೋ ರೇಷನ್ ಗೆ ಬ್ರೇಕ್: ಲಸಿಕೆ ಪಡೆಯದವರಿಗೂ ಪಿಂಚಣಿ, ಪಡಿತರ – ಯಾವುದೇ ಯೋಜನೆಗೆ ಲಸಿಕೆ ಜೋಡಿಸಿಲ್ಲವೆಂದು CS ಸ್ಪಷ್ಟನೆ

ಬೆಂಗಳೂರು: ಕೊರೋನಾ ಲಸಿಕೆ ಪಡೆದುಕೊಳ್ಳದವರಿಗೆ ಪಡಿತರ ನೀಡುವುದಿಲ್ಲ ಎಂದು ಹೇಳುವಂತಿಲ್ಲ. ಲಸಿಕೆಯನ್ನು ಯಾವ ಯೋಜನೆಗೆ ಜೋಡಣೆ ಮಾಡಿಲ್ಲ. ಲಸಿಕೆ ಪಡೆಯದವರಿಗೆ ರೇಷನ್ ನೀಡಲ್ಲ ಎನ್ನುವ ಕ್ರಮವನ್ನು ಜಿಲ್ಲಾಡಳಿತಗಳು ಕೈಗೊಳ್ಳುವಂತಿಲ್ಲ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಸ್ಪಷ್ಟನೆ ನೀಡಿ ಆದೇಶ ಹೊರಡಿಸಿದ್ದಾರೆ.

ಪಡಿತರ ಪಡೆದುಕೊಳ್ಳಲು ಲಸಿಕೆ ಪಡೆದುಕೊಂಡಿರಬೇಕು. ಲಸಿಕೆ ಪಡೆಯದವರಿಗೆ ರೇಷನ್ ಇಲ್ಲವೆಂದು ಚಾಮರಾಜನಗರ ಜಿಲ್ಲಾಧಿಕಾರಿ ಹೇಳಿದ್ದು ವಿವಾದಕ್ಕೆ ಕಾರಣವಾಗಿದ್ದ ನಂತರ ಸರ್ಕಾರದಿಂದ ಸ್ಪಷ್ಟನೆ ನೀಡಲಾಗಿದ್ದು ಲಸಿಕೆ ಪಡೆಯದವರಿಗೆ ಪಿಂಚಣಿ, ಪಡಿತರ ನಿರಾಕರಿಸುವಂತಿಲ್ಲ ಜಿಲ್ಲಾಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಸೂಚನೆ ನೀಡಿ ಆದೇಶ ಹೊರಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...