alex Certify ಈ ಕಾರಣಕ್ಕೆ ರತನ್​ ಟಾಟಾರ ಮನಗೆದ್ದಿದ್ದಾರೆ ‘ತಾಜ್’ ಉದ್ಯೋಗಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ರತನ್​ ಟಾಟಾರ ಮನಗೆದ್ದಿದ್ದಾರೆ ‘ತಾಜ್’ ಉದ್ಯೋಗಿ..!

ಕೈಗಾರಿಕೋದ್ಯಮಿ ರತನ್​ ಟಾಟಾ ಮುಂಬೈನ ತಾಜ್​ ಉದ್ಯೋಗಿಯ ಮಾನವೀಯ ಮೌಲ್ಯವನ್ನು ಶ್ಲಾಘಿಸಿದ್ದಾರೆ. ಈ ಮೂಲಕ ತಾಜ್​ ಮಹಲ್ ಉದ್ಯೋಗಿಿ, ಸೋಶಿಯಲ್​ ಮೀಡಿಯಾ ಸ್ಟಾರ್​ ಆಗಿದ್ದಾರೆ.

ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದ ವೇಳೆ ತಾಜ್​ ಉದ್ಯೋಗಿ ಶ್ವಾನವೊಂದಕ್ಕೆ ಛತ್ರಿಯನ್ನು ಹಿಡಿದಿದ್ದಾರೆ. ಈ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ಎಷ್ಟರ ಮಟ್ಟಿಗೆ ವೈರಲ್​ ಆಯ್ತು ಅಂದರೆ ಕೈಗಾರಿಕೋದ್ಯಮಿ ರತನ್​ ಟಾಟಾರ ಗಮನ ಸೆಳೆಯುವಲ್ಲಿಯೂ ಯಶಸ್ವಿಯಾಗಿದೆ.

ಈ ಫೋಟೋವನ್ನು ಸೋಶಿಯಲ್​ ಮೀಡಿಯಾ ವೇದಿಕೆಯಲ್ಲಿ ಶೇರ್​ ಮಾಡಿರುವ ರತನ್​ ಟಾಟಾ, ಈ ತಾಜ್​ ಉದ್ಯೋಗಿಯು ಜೋರಾದ ಮಳೆ ಸುರಿಯುತ್ತಿದ್ದ ವೇಳೆ ಶ್ವಾನದ ಜೊತೆ ಛತ್ರಿ ಹಂಚಿಕೊಳ್ಳುವಷ್ಟು ದಯಾಗುಣವನ್ನು ಹೊಂದಿದ್ದಾರೆ. ಈ ಅವಿಸ್ಮರಣೀಯ ಕೆಲಸವನ್ನು ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿಯಲಾಗಿದೆ ಎಂದು ಶೀರ್ಷಿಕೆ ನೀಡಿದ್ದಾರೆ.

ರತನ್​ ಟಾಟಾರ ಈ ಪೋಸ್ಟ್​ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಕಮೆಂಟ್​ ವಿಭಾಗದಲ್ಲಿ ತಾಜ್​ ಉದ್ಯೋಗಿಯ ಮಾನವೀಯ ಮೌಲ್ಯಕ್ಕೆ ಶಹಬ್ಬಾಸ್​ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...