alex Certify ಸ್ವಪಕ್ಷೀಯರ ವಿರುದ್ಧವೇ ದೆಹಲಿಯಲ್ಲಿ ಹೊಸ ಬಾಂಬ್​ ಸಿಡಿಸಿದ ರಮೇಶ್​ ಜಾರಕಿಹೊಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಪಕ್ಷೀಯರ ವಿರುದ್ಧವೇ ದೆಹಲಿಯಲ್ಲಿ ಹೊಸ ಬಾಂಬ್​ ಸಿಡಿಸಿದ ರಮೇಶ್​ ಜಾರಕಿಹೊಳಿ

ಕಳೆದುಕೊಂಡ ಸಚಿವ ಸ್ಥಾನವನ್ನ ವಾಪಸ್​ ಪಡೆಯಲು ರಮೇಶ್​ ಜಾರಕಿಹೊಳಿ ಇನ್ನಿಲ್ಲದ ಕಸರತ್ತನ್ನ ಮಾಡುತ್ತಿದ್ದಾರೆ. ಸಿಡಿ ಪ್ರಕರಣದಿಂದಾಗಿ ರಾಜಕೀಯ ಜೀವನದಲ್ಲಿ ದೊಡ್ಡ ಹೊಡೆತವನ್ನೇ ತಿಂದಿರುವ ಗೋಕಾಕ್​ ಸಾಹುಕಾರ ಇದೀಗ ಗಾಯಗೊಂಡ ಹುಲಿಯಂತಾಗಿದ್ದಾರೆ. ಹೀಗಾಗಿ ದೆಹಲಿ ದಿಢೀರ್ ಭೇಟಿ ನೀಡಿರುವ ರಮೇಶ್​ ಜಾರಕಿಹೊಳಿ ಆಪ್ತರ ಬಳಿ ಸ್ವಪಕ್ಷೀಯರ ವಿರುದ್ಧ ಭರ್ಜರಿ ಬಾಂಬ್​ ಸಿಡಿಸಿದ್ದಾರೆ.

ಆಪ್ತರ ಬಳಿ ನೋವನ್ನ ತೋಡಿಕೊಂಡ ರಮೇಶ್​ ಜಾರಕಿಹೊಳಿ, ನನ್ನ ವಿರುದ್ಧ ಸ್ವಪಕ್ಷೀಯದವರೇ ಪಿತೂರಿ ಮಾಡಿದ್ದಾರೆ. ನನ್ನ ಜೊತೆಯಲ್ಲಿ ಇದ್ದುಕೊಂಡೇ ಬಿಜೆಪಿಯ ಆ ಮೂವರು ಷಡ್ಯಂತ್ರ ಹೂಡಿದ್ದಾರೆ. ಬಿದ್ದವನ ಮೇಲೆ ಆಳಿಗೊಂದು ಕಲ್ಲು ಎಂಬಂತೆ ದ್ವೇಷ ಸಾಧಿಸಿದ್ದಾರೆ. ಆದರೆ ಎಲ್ಲರ ಷಡ್ಯಂತ್ರ ಬಯಲಿಗೆಳೆಯುವ ಕಾಲ ಬಂದೇ ಬರುತ್ತದೆ. ನಾನು ಇವೆಲ್ಲವನ್ನ ಎದುರಿಸುತ್ತೇನೆ ಎಂದು ಹೇಳಿಕೊಂಡಿದ್ದಾರಂತೆ.

ಇತ್ತ ದೆಹಲಿ ಪ್ರವಾಸದ ಬಗ್ಗೆ ಎಳ್ಳಷ್ಟೂ ಮಾಹಿತಿ ಬಿಚ್ಚಿಕೊಡದ ರಮೇಶ್ ಜಾರಕಿಹೊಳಿ​, ನಾನು ದೆಹಲಿಯಲ್ಲಿ ಯಾರನ್ನ ಭೇಟಿಯಾಗುತ್ತೇನೆ ಎಂದು ಹೇಳಲ್ಲ. ನಾನು ಭೇಟಿಯಾದ ಬಳಿಕ ಆ ವಿಡಿಯೋ ರಿಲೀಸ್​ ಮಾಡುತ್ತೇನೆ. ಆ ವಿಡಿಯೋ ನೋಡಿದ್ರೆ ನೀವೆಲ್ಲ ಶಾಕ್​ ಆಗ್ತೀರಾ..! ಎಂದು ಹೇಳಿದ್ದಾರೆ ಅಂತಾ ಆಪ್ತ ಮೂಲಗಳು ಮಾಹಿತಿ ನೀಡಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...