alex Certify ಶ್ರೀಗಳ ಒತ್ತಾಯಕ್ಕೆ ಮಣಿದ ರೈಲ್ವೇ ಇಲಾಖೆ: ರಾಮಾಯಣ ಎಕ್ಸ್​ಪ್ರೆಸ್​ ಸಿಬ್ಬಂದಿಯ ಡ್ರೆಸ್ ​ಕೋಡ್​​ ಬದಲಾವಣೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ರೀಗಳ ಒತ್ತಾಯಕ್ಕೆ ಮಣಿದ ರೈಲ್ವೇ ಇಲಾಖೆ: ರಾಮಾಯಣ ಎಕ್ಸ್​ಪ್ರೆಸ್​ ಸಿಬ್ಬಂದಿಯ ಡ್ರೆಸ್ ​ಕೋಡ್​​ ಬದಲಾವಣೆ..!

ಸಾಕಷ್ಟು ವಿರೋಧಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಇಲಾಖೆಯು ರಾಮಾಯಣ ಎಕ್ಸ್​ಪ್ರೆಸ್​ನ ಸಿಬ್ಬಂದಿಗೆ ಹೊಸದಾಗಿ ನೀಡಿದ್ದ ಕೇಸರಿ ಬಣ್ಣದ ಡ್ರೆಸ್​ಕೋಡ್​​ನ್ನು ವಾಪಸ್​ ಪಡೆದಿದೆ. ಪ್ರಯಾಣಿಕರಿಗೆ ಸೇವೆ ನೀಡುವ ಸಿಬ್ಬಂದಿಯು ಕೇಸರಿ ಬಣ್ಣದ ವಸ್ತ್ರ ಹಾಗೂ ರುದ್ರಾಕ್ಷಿ ಮಾಲೆ ಧರಿಸಿದ್ದು ಹಿಂದೂ ಧರ್ಮಕ್ಕೆ ಅವಮಾನ ಎಂದು ಉಜ್ಜಯಿನಿಯ ಶ್ರೀಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು.

ರಾಮಾಯಣ ಎಕ್ಸ್​ಪ್ರೆಸ್​ನ ಸೇವಾ ಸಿಬ್ಬಂದಿಯ ಡ್ರೆಸ್​ಕೋಡ್​ನ್ನು ಸಂಪೂರ್ಣವಾಗಿ ಬದಲಾಯಿಸಿದ್ದೇವೆ. ಡ್ರೆಸ್​ಕೋಡ್​ನಿಂದ ಉಂಟಾದ ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತಿದ್ದೇವೆ ಎಂದು ಭಾರತೀಯ ರೈಲ್ವೆ ಇಲಾಖೆ ಹೇಳಿದೆ.

ಇದಕ್ಕೂ ಮೊದಲು ಐಆರ್​ಸಿಟಿಸಿ ನಿನ್ನೆಯಷ್ಟೇ ರಾಮಾಯಣ ಎಕ್ಸ್​ಪ್ರೆಸ್​ನಲ್ಲಿರುವ ಸೇವಾ ಸಿಬ್ಬಂದಿಯ ಕೇಸರಿ ಉಡುಪನ್ನು ಬದಲಾಯಿಸೋದಾಗಿ ಹೇಳಿತ್ತು.

ರಾಮಾಯಣ ಎಕ್ಸ್​ಪ್ರೆಸ್​ನಲ್ಲಿ ವೇಟರ್​ ಕೆಲಸ ಮಾಡುವ ಸಿಬ್ಬಂದಿ ಕೇಸರಿ ಬಣ್ಣದ ವಸ್ತ್ರ ಹಾಗೂ ರುದ್ರಾಕ್ಷಿ ಮಾಲೆಗಳನ್ನು ಧರಿಸಿ ಪ್ರಯಾಣಿಕರಿಗೆ ಸೇವೆ ನೀಡುತ್ತಿರುವುದು ಸಾಕಷ್ಟು ಸ್ವಾಮೀಜಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದು ಹಿಂದೂ ಧರ್ಮಕ್ಕೆ ಮಾಡಿದ ಅವಮಾನವಾಗಿದೆ. ಈ ಡ್ರೆಸ್​ಕೋಡ್​ ವಾಪಸ್​ ಪಡೆಯದೇ ಇದ್ದಲ್ಲಿ ಡಿಸೆಂಬರ್​ 12ರಂದು ದೆಹಲಿಯಲ್ಲಿ ರೈಲು ತಡೆ ಹಿಡಿಯಲಿದ್ದೇವೆ ಎಂದು ಎಚ್ಚರಿಕೆ ನೀಡಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...