alex Certify ʼಆಚಾರ್ಯʼ ಚಿತ್ರ ಬಿಡುಗಡೆಗೂ ಮುನ್ನ ಕನಕದುರ್ಗೆಗೆ ರಾಮ್ ಚರಣ್ ಪ್ರಾರ್ಥನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆಚಾರ್ಯʼ ಚಿತ್ರ ಬಿಡುಗಡೆಗೂ ಮುನ್ನ ಕನಕದುರ್ಗೆಗೆ ರಾಮ್ ಚರಣ್ ಪ್ರಾರ್ಥನೆ

ಸದ್ಯದಲ್ಲಿಯೇ ಬಿಡುಗಡೆಯಾಗಲಿರುವ ತಮ್ಮ ಚಿತ್ರ `ಆಚಾರ್ಯ’ದ ಯಶಸ್ಸಿಗಾಗಿ ನಟ ರಾಮ್ ಚರಣ್ ಮತ್ತು ನಿರ್ದೇಶಕ ಕೊರಟಾಲ ಶಿವ ಅವರು ವಿಜಯವಾಡದ ಖ್ಯಾತ ಕನಕದುರ್ಗ ದೇವಿಗೆ ಬುಧವಾರ ಪ್ರಾರ್ಥನೆ ಸಲ್ಲಿಸಿದ್ದಾರೆ.

ಆರ್ ಆರ್ ಆರ್ ಚಿತ್ರದ ಖ್ಯಾತಿಯ ರಾಮ್ ಚರಣ್ ಆಧ್ಯಾತ್ಮಿಕತೆ ಬಗ್ಗೆ ಹೆಚ್ಚು ಒಲವಿರುವ ನಟರಾಗಿದ್ದಾರೆ. ಅವರು ಪ್ರತಿ ವರ್ಷ ತಪ್ಪದೇ ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆಗೆ ಹೋಗಿ ಅಯ್ಯಪ್ಪನ ದರ್ಶನ ಪಡೆಯುತ್ತಾರೆ.

545 PSI ನೇಮಕಾತಿ ಅಕ್ರಮ: ಕಿಂಗ್ ಪಿನ್ ಗಳೊಂದಿಗೆ ಸಂಪರ್ಕದಲ್ಲಿದ್ದವರಿಗೆ ಬಿಗ್ ಶಾಕ್

ಈ ವರ್ಷದ ಆರಂಭದಲ್ಲಿ ಆರ್ ಆರ್ ಆರ್ ಚಿತ್ರ ಬಿಡುಗಡೆ ಆಗುತ್ತಿದ್ದಂತೆಯೇ ಅವರು ಮಾಲೆ ಧರಿಸಿದ್ದರು. ʼಆಚಾರ್ಯʼ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಮತ್ತು ರಾಮ್ ಚರಣ್ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಅಂದ ಹಾಗೆ ಆಚಾರ್ಯ ಚಿತ್ರ ಏಪ್ರಿಲ್ 29 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಚಿತ್ರದ ಬಗ್ಗೆ ಬಹುನಿರೀಕ್ಷೆ ಇಟ್ಟುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...