alex Certify 3 ದಶಕದ ನಂತ್ರ ತಮಿಳುನಾಡು ಜೈಲಿಂದ ರಾಜೀವ್ ಗಾಂಧಿ ಹಂತಕರು ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3 ದಶಕದ ನಂತ್ರ ತಮಿಳುನಾಡು ಜೈಲಿಂದ ರಾಜೀವ್ ಗಾಂಧಿ ಹಂತಕರು ರಿಲೀಸ್

ಚೆನ್ನೈ: ತಮಿಳುನಾಡು ಜೈಲಿನಿಂದ ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡಲಾಗಿದೆ. ತಮಿಳುನಾಡಿನ ವೆಲ್ಲೂರು ಜೈಲಿನಿಂದ ನಳಿನಿ ಶ್ರೀಹರನ್ ಬಿಡುಗಡೆ ಮಾಡಲಾಗಿದೆ.

ರಾಜೀವ್ ಗಾಂಧಿ ಅವರನ್ನು ಕೊಂದ ಎಲ್ಲಾ ಆರು ಅಪರಾಧಿಗಳನ್ನು ರಿಲೀಸ್ ಮಾಡಲಾಗಿದೆ. ರಾಜೀವ್ ಗಾಂಧಿ ಹಂತಕರಾದ ನಳಿನಿ ಶ್ರೀಹರನ್, ರವಿಚಂದ್ರನ್, ಸಂತನ್, ಮುರುಗನ್, ಜಯಕುಮಾರ್, ರಾಬರ್ಟ್ ಪೈಸ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಸುಪ್ರೀಂ ಕೋರ್ಟ್ ನಿನ್ನೆ ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ಸೂಚನೆ ನೀಡಿತ್ತು.

ಮೇ 21, 1991 ರಂದು ಬಾಂಬ್ ಸ್ಫೋಟಕ್ಕೆ ಸಾಕ್ಷಿಯಾಗಿದ್ದ ನಳಿನಿ ಶ್ರೀಹರನ್ ಶನಿವಾರ ವೆಲ್ಲೂರು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಮೂರು ದಶಕಗಳ ನಂತರ ನಳಿನಿ, ಇತರ ಐವರು ಅಪರಾಧಿಗಳು ಜೈಲಿನಿಂದ ಹೊರ ಬಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...