alex Certify ಅಪ್ರಾಪ್ತನಿಂದ ಆಘಾತಕಾರಿ ಕೃತ್ಯ: ಹುಡುಗಿ ಜೊತೆ ಸೇರಿ ಮಾಜಿ ಗೆಳತಿ ಕೊಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ರಾಪ್ತನಿಂದ ಆಘಾತಕಾರಿ ಕೃತ್ಯ: ಹುಡುಗಿ ಜೊತೆ ಸೇರಿ ಮಾಜಿ ಗೆಳತಿ ಕೊಲೆ

ರಾಯ್‌ ಪುರ: ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಪ್ರಾಪ್ತ ತನ್ನ ಹುಡುಗಿಯೊಂದಿಗೆ ಸೇರಿ ಮಾಜಿ ಗೆಳತಿಯನ್ನು ಕೊಲೆ ಮಾಡಿದ್ದಾನೆ.

ಮಾಜಿ ಗೆಳತಿ ಮದುವೆಗೆ ಒತ್ತಾಯಿಸಿದ್ದರಿಂದ ಕತ್ತು ಹಿಸುಕಿ ಕೊಲೆ ಮಾಡಿ ನೇಣು ಹಾಕಿದ್ದು, ಆತ್ಮಹತ್ಯೆ ಎನ್ನುವಂತೆ ಬಿಂಬಿಸಿದ್ದಾನೆ. ಛತ್ತೀಸ್‌ ಗಢದ ಗೌರೆಲಾ ಪೇಂದ್ರ ಮಾರ್ವಾಹಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಸಂತ್ರಸ್ತೆ ಮೃತದೇಹವನ್ನು ಕಾರ್ಖಾನೆಯ ಆವರಣದಲ್ಲಿ ನೇಣು ಹಾಕುವ ಮೂಲಕ ಜೋಡಿಗಳು ಆತ್ಮಹತ್ಯೆಯಂತೆ ಬಿಂಬಿಸಲು ಪ್ರಯತ್ನಿಸಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ಜೂನ್ 9 ರಂದು ಘಟನೆ ನಡೆದಿದೆ. 17 ವರ್ಷದ ಬಾಲಕಿ ತನ್ನ ಸೈಕಲ್‌ ನಲ್ಲಿ ಮನೆಯಿಂದ ಹೊರ ಹೋಗಿದ್ದವಳು ಹಿಂತಿರುಗಲಿಲ್ಲ. ಜೂನ್ 12 ರಂದು ಆಕೆಯ ಪೋಷಕರು ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದಾರೆ. ನಂತರ, ಆಕೆಯ ಮೃತದೇಹ ಸಮೀಪದ ಧನಪುರ ಗ್ರಾಮದ ಕಾರ್ಖಾನೆಯ ಆವರಣದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ ಮೃತಳ ಕಾಲುಗಳು ನೆಲಕ್ಕೆ ತಾಗಿದ್ದರಿಂದ ತನಿಖಾ ತಂಡ ನೇಣು ಬಿಗಿದುಕೊಂಡಿರುವುದು ಅನುಮಾನಾಸ್ಪದವಾಗಿದೆ ಎಂಬುದರ ಬಗ್ಗೆ ತನಿಖೆ ಕೈಗೊಂಡಿದೆ. ಶವಪರೀಕ್ಷೆ ವರದಿಯಲ್ಲಿ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಜೂ.9 ರಂದು ಮದುವೆಯಾಗುವಂತೆ ಬಾಲಕನ ಮೇಲೆ ಒತ್ತಡ ಹೇರಲು ಆತನನ್ನು ಭೇಟಿಯಾಗಲು ಹೋಗಿದ್ದ ಆಕೆ ತನ್ನ ಕೈ ಬಿಡದಂತೆ ಮನವಿ ಮಾಡಿಕೊಂಡಿದ್ದಳು. ವಿಚಾರಣೆ ವೇಳೆ ಬಾಲಕ, ಮೃತಳೇ ತನ್ನ ಮೊದಲ ಗೆಳತಿಯಾಗಿದ್ದು, ಆಕೆ ತನ್ನನ್ನು ಮದುವೆಯಾಗುವುದಾಗಿ ಅಥವಾ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಳು. ಕೋಪದ ಭರದಲ್ಲಿ ಅವಳನ್ನು ಕತ್ತು ಹಿಸುಕಿ ಕೊಂದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.

ಗೆಳತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುವಂತೆ ಬಿಂಬಿಸಲು ಆಕೆಯ ಮೃತದೇಹವನ್ನು ನಿಶ್ಚಿತಾರ್ಥ ಮಾಡಿಕೊಂಡಿದ್ದ ಭಾವಿ ಪತ್ನಿ ನೆರವಿನಿಂದ ಕಾರ್ಖಾನೆ ಆವರಣಕ್ಕೆ ಸಾಗಿಸಿದ್ದಾನೆ. ಅಲ್ಲಿ ಅವಳೇ ನೇಣು ಹಾಕಿಕೊಂಡಂತೆ ಕಾಣುವಂತೆ ಹಗ್ಗ ಕಟ್ಟಿದ್ದಾರೆ. ಸೈಕಲ್ ಮತ್ತು ಫೋನ್ ಮರೆ ಮಾಚಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಬಾಲಕ ಮತ್ತು ಆತ ನಿಶ್ಚಿತಾರ್ಥ ಮಾಡಿಕೊಂಡಿದ್ದ ಹುಡುಗಿಯನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...