![](https://kannadadunia.com/wp-content/uploads/2023/03/23598-2.png)
ರೈಲಿನಲ್ಲಿ ರೈಲ್ವೇ ಸಚಿವರು ಖುದ್ದು ಮೌಲ್ಯಮಾಪನ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ಪರಿಶೀಲನೆ ವೇಳೆ ಸಚಿವರಿಗೆ ಪ್ರಯಾಣಿಕರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ರೈಲುಗಳು ಮೊದಲಿಗಿಂತ ಹೆಚ್ಚು ಸ್ವಚ್ಛವಾಗಿವೆ, ಅವು ಸಮಯಕ್ಕೆ ಸರಿಯಾಗಿ ಬರುತ್ತಿವೆ, ಪ್ಲಾಟ್ಫಾರ್ಮ್ಗಳು ಸ್ವಚ್ಛವಾಗಿವೆ ಎಂದು ಪ್ರಯಾಣಿಕರು ತಿಳಿಸಿದರು.
ಈ ಮಾರ್ಗದಲ್ಲಿ ಎರಡು ಉಪಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಸಚಿವರು ತಿಳಿಸಿದರು. ಮೊದಲು ಟ್ರ್ಯಾಕ್ನಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಈ ಮಾರ್ಗದಲ್ಲಿ ವೇಗವನ್ನು ಹೆಚ್ಚಿಸುವುದು. ಎರಡನೆಯದಾಗಿ ಪ್ರಯೋಗಗಳು ಮತ್ತು ಪರೀಕ್ಷೆಯ ನಂತರ ಪ್ಯಾಂಟೋಗ್ರಾಫ್ ರೈಲುಗಳು (ವಂದೇ ಭಾರತ್) ಶೀಘ್ರದಲ್ಲೇ ದೆಹಲಿ-ಜೈಪುರ ನಡುವೆ ಈ ಟ್ರ್ಯಾಕ್ನಲ್ಲಿ ಓಡಲಿವೆ ಎಂದು ರೈಲ್ವೆ ಸಚಿವರು ಹೇಳಿದರು.
ಈ ಮಾರ್ಗದಲ್ಲಿ ಭಾರತೀಯ ರೈಲ್ವೇ ಹೊಸ ಯೋಜನೆಗಳನ್ನು ಪ್ರಾರಂಭಿಸಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿಕೆಯಲ್ಲಿ ಪ್ರಕಟಿಸಿದ್ದಾರೆ.