alex Certify ಸ್ಟಂಟ್ ಮ್ಯಾನ್ ವಿವೇಕ್ ಮೃತಪಟ್ಟಾಗ ಸೆಟ್ ನಲ್ಲಿ ಇರಲಿಲ್ಲ: ರಚಿತಾ ರಾಮ್ ಸ್ಪಷ್ಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಟಂಟ್ ಮ್ಯಾನ್ ವಿವೇಕ್ ಮೃತಪಟ್ಟಾಗ ಸೆಟ್ ನಲ್ಲಿ ಇರಲಿಲ್ಲ: ರಚಿತಾ ರಾಮ್ ಸ್ಪಷ್ಟನೆ

ಸ್ಯಾಂಡಲ್ ವುಡ್ ನಟ ಅಜಯ್ ರಾವ್ ಹಾಗೂ ರಚಿತಾ ರಾಮ್ ಅಭಿನಯದ ‘ಲವ್ ಯು ರಚ್ಚು’ ಚಿತ್ರದ ಸೆಟ್ ನಲ್ಲಿ ಸ್ಟಂಟ್ ಮ್ಯಾನ್ ವಿವೇಕ್ ದುರದೃಷ್ಟಕರ ಅಪಘಾತದಲ್ಲಿ ಮೃತಪಟ್ಟರು. ಅವರ ಅಕಾಲಿಕ ನಿಧನಕ್ಕೆ ನಟಿ ರಚಿತಾ ರಾಮ್ ಸಂತಾಪ ಸೂಚಿಸಿದ್ದರೂ, ದುರ್ಘಟನೆ ವೇಳೆ ತಾನು ಚಿತ್ರೀಕರಣದ ಸೆಟ್ ನಲ್ಲಿ ಇರಲಿಲ್ಲ ಎಂದು ಸಾಮಾಜಿಕ ಜಾಲತಾಣದ ಮುಖಾಂತರ ಹೇಳಿಕೊಂಡಿದ್ದಾರೆ.

“ನಮಸ್ಕಾರ, ಎಲ್ಲರೂ ಚೆನ್ನಾಗಿ ಮತ್ತು ಸುರಕ್ಷಿತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಭಾವಿಸುತ್ತೇನೆ. ನಿಮ್ಮೆಲ್ಲರನ್ನೂ ಎಚ್ಚರಿಕೆಯಿಂದ ಇರುವಂತೆ ವಿನಂತಿಸುತ್ತೇನೆ. ಲವ್ ಯೂ ರಚ್ಚು ಸೆಟ್ ನಲ್ಲಿ ದುರದೃಷ್ಟಕರ ಹೃದಯ ವಿದ್ರಾವಕ ಘಟನೆ ಸಂಭವಿಸಿದಾಗಿನಿಂದ ನಾನು ಸ್ವಲ್ಪ ಸಮಯ ಶಾಕ್ ಗೆ ಒಳಗಾಗಿದ್ದೆ. ನನ್ನ ಮೌನವನ್ನು ತಪ್ಪಾಗಿ ಅರ್ಥೈಸುವುದು ಮತ್ತು ದುರುಪಯೋಗಪಡಿಸಿಕೊಳ್ಳುವುದು ತುಂಬಾ ನೋವಾಗುತ್ತದೆ. ಘಟನೆ ನಡೆದಾಗ ನಾನು ಸ್ಥಳದಲ್ಲಿ ಇರಲಿಲ್ಲ ಎಂಬುದು ಸತ್ಯ. ಶೋಬರಿ ಚಿತ್ರದ ಚಿತ್ರೀಕರಣಕ್ಕಾಗಿ ನಾನು ಆಗಸ್ಟ್ 2 ರಿಂದ ಮೈಸೂರಿನಲ್ಲಿದ್ದೇನೆ. ಘಟನೆಯ ಸಮಯದಲ್ಲಿ ನನ್ನ ಉಪಸ್ಥಿತಿಯ ಅಥವಾ ಭಾಗವಹಿಸುವಿಕೆಯ ಬಗ್ಗೆ ಯಾರೇ ಆಗಲಿ, ಸತ್ಯ ಪರಿಶೀಲನೆ ಮಾಡುವುದರಿಂದ ಇಂತಹ ಭೀಕರವಾದ ಕಾಮೆಂಟ್‌ಗಳು ಮತ್ತು ಟೀಕೆಗಳನ್ನು ಮಾಡುವುದರಿಂದ ಮನಸ್ಸಿಗೆ ತುಂಬಾ ನೋವಾಗುತ್ತದೆ.

ಅದೇನೇ ಇದ್ದರೂ, ನಾನು ಸೆಟ್ ನಲ್ಲಿದ್ದೇನೆ ಅಥವಾ ಇಲ್ಲದೇ ಇರಬಹುದು, ಆದರೆ ಅವರ ಕುಟುಂಬವು ಇಂತಹ ಅಸಹನೀಯ ಕಷ್ಟವನ್ನು ಎದುರಿಸಿದೆ. ದೇವರು ಅವರಿಗೆ ಜೀವನವನ್ನು ಎದುರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಜನರು ಏನನ್ನು ನಂಬುವುದಿಲ್ಲವೋ ಅದನ್ನು ನಂಬಲಿ. ದೇವರಿಗೆ ಸತ್ಯ ತಿಳಿದಿದೆ ಮತ್ತು ಅವನು ನಿಮ್ಮ ಹೃದಯವನ್ನು ನೋಡುತ್ತಾನೆ” ಎಂದು ರಚಿತಾ ರಾಮ್ ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...