alex Certify ರಾಜಕೀಯ ದ್ವೇಷದಿಂದ ಹೆಚ್​ಡಿಕೆ ಈ ರೀತಿ ಮಾಡಿದ್ರು: ಸಚಿವ ಆರ್​.ಅಶೋಕ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜಕೀಯ ದ್ವೇಷದಿಂದ ಹೆಚ್​ಡಿಕೆ ಈ ರೀತಿ ಮಾಡಿದ್ರು: ಸಚಿವ ಆರ್​.ಅಶೋಕ್​

ಕೆಆರ್​ಎಸ್​ ಡ್ಯಾಂ ವಿಚಾರವಾಗಿ ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ವಿರುದ್ಧ ನಡೆಯುತ್ತಿರುವ ವಾಕ್ಸಮರದ ವಿಚಾರವಾಗಿ ಬೊಮ್ಮನಹಳ್ಳಿಯ ಸಚಿವ ಆರ್​.ಅಶೋಕ್​​​ ಪ್ರತಿಕ್ರಿಯೆ ನೀಡಿದ್ರು. ಸಂಸತ್​ ಸದಸ್ಯರಾಗಿ ಅವರ ಕೆಲಸವನ್ನ ಅವರು ಮಾಡಲಿ. ಜನರ ಆಸ್ತಿ ಪಾಸ್ತಿ ಉಳಿಸುವ ವಿಚಾರದಲ್ಲಿ ನಮ್ಮ ತಕರಾರಿಲ್ಲ ಎಂದು ಹೇಳಿದ್ರು.

ಕುಮಾರಸ್ವಾಮಿಗೆ ಸುಮಲತಾ ವಿರುದ್ಧ ಹಳೆಯ ಸೇಡಿದೆ. ರಾಜಕೀಯ ದ್ವೇಷವನ್ನ ಹೆಚ್​ಡಿಕೆ ಈ ರೀತಿ ತೀರಿಸಿಕೊಳ್ತಿದ್ದಾರೆ. ಚುನಾವಣೆಯ ಸಮಯದಲ್ಲಿ ನಡೆದ ವಿಚಾರವನ್ನ ಹೆಚ್​ಡಿಕೆ ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ರು.

ಇನ್ನು ಗಣಿ ಪ್ರದೇಶಗಳಿಗೆ ಸಂಸದೆ ಸುಮಲತಾ ಭೇಟಿ ವಿಚಾರವಾಗಿ ಮಾತನಾಡಿದ ಅವ್ರು ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸಿದ್ದೇವೆ. ಗಣಿಗಾರಿಕಾ ಪ್ರದೇಶಗಳಲ್ಲಿ ಅಕ್ರಮ ತಡೆಯಲು ಆಯಾ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್​ಗೆ ಸೂಚನೆ ನೀಡಿದ್ದೇವೆ. ಸಂಸದರಾಗಿ ಅವರು ಜನರ ಆಸ್ತಿಪಾಸ್ತಿ ಕಾಪಾಡಲು ಮುಂದಾಗಿದ್ದಾರೆ ಎಂದರೆ ಅದು ಸ್ವಾಗತಾರ್ಹ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...