alex Certify ಪುಷ್ಕರ್ ಅಂದ್ರೆ ಫ್ಲವರ್ ಅಂದುಕೊಂಡ್ರಾ, ಅದು ಫೈಯರ್…! ಚುನಾವಣಾ ಪ್ರಚಾರದಲ್ಲಿ ʼಪುಷ್ಪಾʼ ಡೈಲಾಗ್ ಹೊಡೆದ ರಾಜನಾಥ್ ಸಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಷ್ಕರ್ ಅಂದ್ರೆ ಫ್ಲವರ್ ಅಂದುಕೊಂಡ್ರಾ, ಅದು ಫೈಯರ್…! ಚುನಾವಣಾ ಪ್ರಚಾರದಲ್ಲಿ ʼಪುಷ್ಪಾʼ ಡೈಲಾಗ್ ಹೊಡೆದ ರಾಜನಾಥ್ ಸಿಂಗ್

ಪುಷ್ಪ ಚಿತ್ರ ರಿಲೀಸ್ ಆಗಿ ತಿಂಗಳುಗಳೇ ಆಗಿದ್ರು, ಟ್ರೆಂಡಿಂಗ್ ಲಿಸ್ಟ್ ನಲ್ಲಿ ಈಗಲೂ ನಂ 1 ಆಗಿದೆ. ಪುಷ್ಪ ಚಿತ್ರದ ಹಾಡುಗಳು, ಡೈಲಾಗ್ ಗಳು ಇಡೀ ಭಾರತ ಮಾತ್ರವಲ್ಲ,‌ ಅಂತರಾಷ್ಟ್ರೀಯ ಮಟ್ಟದಲ್ಲೂ ಸಖತ್ ಸದ್ದು ಮಾಡಿವೆ. ಈಗ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚುನಾವಣಾ ಪ್ರಚಾರದಲ್ಲಿ ಪುಷ್ಪ ಸಿನಿಮಾದ ಡೈಲಾಗ್ ಬಳಸಿದ್ದಾರೆ.

ಹೌದು, ಉತ್ತರಾಂಖಡದ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿರುವ ರಾಜನಾಥ್ ಸಿಂಗ್ ಮಂಗಳವಾರ ಗಂಗೊಳ್ಳಿಹತ್ ನಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಪುಷ್ಪಾ ಚಿತ್ರದ ಜನಪ್ರಿಯ ಡೈಲಾಗ್ ಅನ್ನು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಕನೆಕ್ಟ್ ಮಾಡಿ ವಿಶೇಷ ರೀತಿಯಲ್ಲಿ ಹೇಳಿದರು.

ಭಾರತದ ಭೂಪ್ರದೇಶದಲ್ಲಿ ಶಂಕಿತ ಮರದ ಪೆಟ್ಟಿಗೆಗಳನ್ನು ಇರಿಸಿದ ಪಾಕಿಸ್ತಾನದ ಡ್ರೋನ್​ಗಳು..!

ಇತ್ತೀಚಿನ ದಿನಗಳಲ್ಲಿ ಪುಷ್ಪಾ ಚಿತ್ರದ ಹೆಸರು ಸುದ್ದಿಯಲ್ಲಿದೆ ಮತ್ತು ನಮ್ಮ ಮುಖ್ಯಮಂತ್ರಿ ಹೆಸರು ಪುಷ್ಕರ್, ಆದರೆ ಈ ಪುಷ್ಕರ್ ಹೆಸರು ಕೇಳಿದಾಗ ಕಾಂಗ್ರೆಸ್ಸಿಗರಿಗೆ ಈ ಪುಷ್ಕರ್ ಹೂವು ಎಂದು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ನಾನು ಅವರಿಗೆ ಹೇಳಲು ಬಯಸುತ್ತೇನೆ ನಮ್ಮ ಪುಷ್ಕರವೂ ಒಂದು ಹೂವು ಕೂಡ ಹೌದು. ಬೆಂಕಿ ಕೂಡ ಹೌದು. ನಮ್ಮ ಪುಷ್ಕರ್ ಎಂದಿಗೂ ತಲೆಬಾಗುವುದಿಲ್ಲ, ಎಂದಿಗೂ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.

ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್, ಈ ಬಾರಿಯು ತಮ್ಮ‌ ಹಾಲಿ ಕ್ಷೇತ್ರ ಕಥಿಮಾದಿಂದ ಸ್ಪರ್ಧಿಸಲಿದ್ದಾರೆ‌. ಎಪ್ಪತ್ತು ವಿಧಾನಸಭೆ ಕ್ಷೇತ್ರಗಳಿರುವ ಉತ್ತರಾಖಂಡ ರಾಜ್ಯದಲ್ಲಿ ಒಂದೇ ಹಂತದಲ್ಲಿ ಫೆಬ್ರವರಿ 14ರಂದು ಚುನಾವಣೆ ನಡೆಯಲಿದೆ. ಮಾರ್ಚ್ 10ರಂದು ಫಲಿತಾಂಶ ಬಿಡುಗಡೆಯಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...