alex Certify ಪುನೀತ್​ ನೆಚ್ಚಿನ ತಾಣವಾಗಿತ್ತು ಅಂಜನಾದ್ರಿ..! ಜೇಮ್ಸ್​ ಚಿತ್ರೀಕರಣದ ವೇಳೆ ಹನುಮಂತನ ಜನ್ಮ ಸ್ಥಳಕ್ಕೆ ಭೇಟಿ ನೀಡಿದ್ದ ಅಪ್ಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುನೀತ್​ ನೆಚ್ಚಿನ ತಾಣವಾಗಿತ್ತು ಅಂಜನಾದ್ರಿ..! ಜೇಮ್ಸ್​ ಚಿತ್ರೀಕರಣದ ವೇಳೆ ಹನುಮಂತನ ಜನ್ಮ ಸ್ಥಳಕ್ಕೆ ಭೇಟಿ ನೀಡಿದ್ದ ಅಪ್ಪು

ಬಾಲನಟನಾಗಿ ಕಾಣದಂತೆ ಮಾಯವಾದನೋ ಎಂಬ ಹಾಡನ್ನ ಹಾಡಿದ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಇಂದು ನಿಜವಾಗಿಯೂ ಅಭಿಮಾನಿಗಳ ಕಣ್ಣಿಂದ ಮಾಯವಾಗಿ ಬಿಟ್ಟಿದ್ದಾರೆ. ಪುನೀತ್​​ರನ್ನು ಈ ರೀತಿಯಾಗಿ ನೋಡುವ ದಿನ ಇಷ್ಟು ಬೇಗ ಬರಬಹುದು ಎಂಬ ಸಣ್ಣ ಕಲ್ಪನೆಯೂ ಇಲ್ಲದ ವೇಳೆಯಲ್ಲಿಯೇ ದೊಡ್ಮನೆ ಕುಡಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಕನ್ನಡದ ಮೇರು ನಟ ಪುನೀತ್​ ರಾಜ್​ಕುಮಾರ್​​ಗೆ ಅಂಜನಾದ್ರಿ ಬೆಟ್ಟ ಅತ್ಯಂತ ನೆಚ್ಚಿನ ತಾಣವಾಗಿತ್ತು. ಹನುಮಂತನ ಜನ್ಮಸ್ಥಳವೆಂದೇ ಕರೆಯಲ್ಪಡುವ ಈ ಬೆಟ್ಟಕ್ಕೆ ಪುನೀತ್​ ಪದೇ ಪದೇ ಭೇಟಿ ನೀಡುತ್ತಿದ್ದರು. ದೊಡ್ಮನೆ ಹುಡುಗ, ರಣವಿಕ್ರಮ, ಜೇಮ್ಸ್​ ಸೇರಿದಂತೆ ಅನೇಕ ಸಿನಿಮಾಗಳ ಚಿತ್ರೀಕರಣವನ್ನೂ ಪುನೀತ್​ ಈ ಭಾಗದಲ್ಲಿಯೇ ಮಾಡಿದ್ದಾರೆ.

2 ತಿಂಗಳ ಹಿಂದೆಯಷ್ಟೇ ಜೇಮ್ಸ್​ ಚಿತ್ರದ ಚಿತ್ರೀಕರಣಕ್ಕಾಗಿ ಪುನೀತ್​ ಅಂಜನಾದ್ರಿಗೆ ಆಗಮಿಸಿದ್ದರು. ಈ ವೇಳೆ ಅಂಜನಾದ್ರಿ ಬೆಟ್ಟವನ್ನು ಏರಿದ್ದರು. ಬಳಿಕ ಮಣಿಭದ್ರೇಶ್ವರ ತಳವಾರಘಟ್ಟ ಆನೆಗೊಂದಿಯನ್ನು ಕಣ್ತುಂಬಿಕೊಂಡಿದ್ದರು. ಅಂಜನಾದ್ರಿ ಬೆಟ್ಟ ಏರಿದ್ದ ಪುನೀತ್​ ಅಲ್ಲಿದ್ದ ಮಂಗಗಳಿಗೂ ಬಾಳೆ ಹಣ್ಣು ನೀಡಿದ್ದರು.
ಪುನೀತ್​ ರಾಜ್​ಕುಮಾರ್​ ನಿಧನದ ಬಳಿಕ ಈ ಎಲ್ಲಾ ಘಟನೆಗಳು ನೆನಪಾಗಿ ಕಾಡುತ್ತಿವೆ. ಪುನೀತ್​ ಒಬ್ಬ ನಟನಾಗಿ ಅಲ್ಲ ವ್ಯಕ್ತಿತ್ವದ ಮೂಲಕವೇ ಕರುನಾಡಿನ ಪಾಲಿಗೆ ರಾಜಕುಮಾರ ಎನಿಸಿದವರು. ಎಲ್ಲರನ್ನೂ ಒಂದೇ ರೀತಿ ಕಾಣುತ್ತಿದ್ದ ಪುನೀತ್​ ಮತ್ತೊಮ್ಮೆ ಇದೇ ನಾಡಿನಲ್ಲಿ ಹುಟ್ಟಿ ಬರಲಿ ಎಂಬುದೇ ಎಲ್ಲರ ಆಶಯವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...