alex Certify ‘ಪ್ರಧಾನಿ ಮೋದಿಗೆ ವಿದೇಶಗಳ ಮೇಲಿರುವಷ್ಟು ಪ್ರೀತಿ, ಕರ್ನಾಟಕದ ಮೇಲಿಲ್ಲ’ : ಸಚಿವ ಪ್ರಿಯಾಂಕ್ ಖರ್ಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪ್ರಧಾನಿ ಮೋದಿಗೆ ವಿದೇಶಗಳ ಮೇಲಿರುವಷ್ಟು ಪ್ರೀತಿ, ಕರ್ನಾಟಕದ ಮೇಲಿಲ್ಲ’ : ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು : ಪ್ರಧಾನಿ ಮೋದಿಗೆ ವಿದೇಶಗಳ ಮೇಲಿರುವಷ್ಟು ಪ್ರೀತಿ ಕರ್ನಾಟಕದ ಮೇಲಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ಧಾಳಿ ನಡೆಸಿದ್ದಾರೆ.

ರಾಜ್ಯದ ರೈತರು ಬರದಿಂದ ಕಂಗಾಲಾಗಿದ್ದಾರೆ, ಇಂತಹ ಪ್ರಾಕೃತಿಕ ಸವಾಲುಗಳು ಎದುರಾದಾಗಲೆಲ್ಲ ಕೇಂದ್ರ ಸರ್ಕಾರ ಕನ್ನಡಿಗರನ್ನು ಸದಾ ಸವತಿ ಮಕ್ಕಳಂತೆ ಕಂಡಿದೆ.ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಹಲವು ಪತ್ರಗಳನ್ನು ಬರೆದರು ಕೇಂದ್ರದ ಸ್ಪಂದನೆ ಇಲ್ಲ, ಖುದ್ದು ಭೇಟಿಯಾಗಿ ಬರ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟರೂ ಪರಿಹಾರ ಇಲ್ಲ ಎಂದಿದ್ದಾರೆ.

ಕರ್ನಾಟಕ ಅಫ್ಘಾನಿಸ್ತಾನ, ಬಾಂಗ್ಲಾದೇಶಗಳಲ್ಲಿದ್ದಿದ್ದರೆ ಪ್ರಧಾನಿಗಳ ಮನ ಮಿಡಿಯುತ್ತಿತ್ತೋ ಏನೋ! ಏಕೆಂದರೆ ಅವರಿಗೆ ವಿದೇಶಗಳ ಮೇಲಿರುವಷ್ಟು ಪ್ರೀತಿ ಕರ್ನಾಟಕದ ಮೇಲಿಲ್ಲ!ರಾಜ್ಯದಲ್ಲಿ 25+1 ಬಿಜೆಪಿ ಸಂಸದರಿದ್ದಾರೆ, ಅವರಿಗೆ ಕನ್ನಡಿಗರ ಸ್ಥಿತಿಗತಿಯ ಬಗ್ಗೆ, ತಮ್ಮ ಹೊಣೆಗಾರಿಕೆಯ ಬಗ್ಗೆ ಕಿಂಚಿತ್ತೂ ಪ್ರಜ್ಞೆ ಇಲ್ಲ. ಸಂಸದ ಸ್ಥಾನವನ್ನು ಕೇವಲ “ಮೋದಿ ಭಜನಾ ಮಂಡಳಿಯ ಸದಸ್ಯತ್ವ” ಎಂದು ಪರಿಭಾವಿಸಿರುವಂತಿದೆ ಎಂದಿದ್ದಾರೆ.

ಅಂಟಿದ ರಕ್ತದ ಕಲೆಗಳನ್ನು ತೋರಿಸಿ ಮತ ಕೇಳುತ್ತದೆಯೇ ಬಿಜೆಪಿ?

ಬಿಜೆಪಿ ಸಂಸದರಿಗೆ ಸಿದ್ದರಾಮಯ್ಯ ಏನ್ ಮಾಡ್ತಿದಾರೆ, ಡಿಕೆ ಶಿವಕುಮಾರ್ ಏನ್ ಮಾತಾಡ್ತಾರೆ ಎಂಬುದರ ಬಗ್ಗೆ ಇರುವ ಅರ್ಧದಷ್ಟು ಆಸಕ್ತಿ ಜನರ ಬಗ್ಗೆ ಇದ್ದಿದ್ದರೆ ಕನ್ನಡಿಗರಿಂದ ಪಡೆದ ಮತಕ್ಕೆ ಸ್ವಲ್ಪವಾದರೂ ನ್ಯಾಯ ಸಲ್ಲಿಸಿದಂತಾಗುತ್ತಿತ್ತು.ಬರ ಪರಿಹಾರಕ್ಕಾಗಿ ಅಥವಾ ಇನ್ಯಾವುದೇ ರಾಜ್ಯದ ಸಮಸ್ಯೆಗಳ ಬಗ್ಗೆ ಒಮ್ಮೆಯೂ ಬಿಜೆಪಿ ಕರ್ನಾಟಕ ಸಂಸದರು, ನಿಯೋಗ ಮಾಡಿಕೊಂಡು ಹೋಗಿ ಕೇಂದ್ರ ಸರ್ಕಾರವನ್ನು ಗಮನ ಸೆಳೆದಿರುವ ಉದಾಹರಣೆ ಇಲ್ಲ.ಕನ್ನಡಿಗರ ಬೆನ್ನಿಗೆ ಇರಿದ ಚೂರಿಯಲ್ಲಿ ಅಂಟಿದ ರಕ್ತದ ಕಲೆಗಳನ್ನು ತೋರಿಸಿ ಮತ ಕೇಳುತ್ತದೆಯೇ ಬಿಜೆಪಿ? ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ಧಾಳಿ ನಡೆಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...