alex Certify ವಾರಣಾಸಿಯ ಘಾಟ್​ಗಳಲ್ಲಿ ಹಿಂದೂಯೇತರರಿಗೆ ಪ್ರವೇಶ ನಿರ್ಬಂಧಿಸಿ ಪೋಸ್ಟರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾರಣಾಸಿಯ ಘಾಟ್​ಗಳಲ್ಲಿ ಹಿಂದೂಯೇತರರಿಗೆ ಪ್ರವೇಶ ನಿರ್ಬಂಧಿಸಿ ಪೋಸ್ಟರ್

ಗಂಗಾನದಿಯುದ್ದಕ್ಕೂ ಇರುವ ವಾರಣಾಸಿಯ ಘಾಟ್​ಗಳಲ್ಲಿ ಹಿಂದೂಯೇತರ ಪ್ರವೇಶವನ್ನು ನಿರ್ಬಂಧಿಸುವಂತ ಪೋಸ್ಟರ್​ಗಳನ್ನು ಕಟ್ಟಡಗಳ ಗೋಡೆಗಳ ಮೇಲೆ ಅಂಟಿಸಲಾಗಿದೆ. ಇದು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಕಾರ್ಯಕರ್ತರ ಕೆಲಸ ಎಂದು ಹೇಳಲಾಗುತ್ತಿದೆ.

ಈ ವಿಚಾರವಾಗಿ ಮಾತನಾಡಿದ ಭಜರಂಗದಳದ ನಗರ ಸಂಚಾಲಕ ನಿಖಿಲ್​ ತ್ರಿಪಾಠಿ ಈ ಪೋಸ್ಟರ್​​ ಮೂಲಕ ಘಾಟ್​ಗಳನ್ನು ಪಿಕ್ನಿಕ್​ ಸ್ಪಾಟ್​ ಎಂದುಕೊಳ್ಳುವವರಿಗೆ ಸ್ಪಷ್ಟ ಸಂದೇಶ ನೀಡಲಾಗಿದೆ ಎಂದು ಹೇಳಿದರು.

ಹಿಂದೂಯೇತರರಿಗೆ ನಾವು ಗಂಗಾ ನದಿಯ ಘಾಟ್​ಗಳಿಂದ ದೂರವಿರುವಂತೆ ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ. ಏಕೆಂದರೆ ಇದು ಪಿಕ್ನಿಕ್​ ಸ್ಪಾಟ್ ಅಲ್ಲ. ಇದೊಂದು ಸನಾತನ ಸಂಸ್ಕೃತಿಯ ಸಂಕೇತವಾಗಿದೆ ಎಂದು ಹೇಳಿದರು.

ಇದೇ ವಿಚಾರವಾಗಿ ಮಾತನಾಡಿದ ವಿಶ್ವ ಹಿಂದೂ ಪರಿಷತ್​ ನಗರ ಕಾರ್ಯದರ್ಶಿ ರಾಜನ್​ ಗುಪ್ತಾ ಸನಾತನ ಧರ್ಮದ ಬಗ್ಗೆ ಗೌರವ ಇಲ್ಲದವರು ಘಾಟ್​ಗಳು ಹಾಗೂ ದೇವಸ್ಥಾನಗಳಿಗೆ ಬರಬಾರದು. ಸನಾತನ ಧರ್ಮಕ್ಕೆ ಯಾರು ಗೌರವ ನೀಡುತ್ತಾರೋ ಅಂತವರನ್ನು ನಾವು ಸ್ವಾಗತಿಸುತ್ತೇವೆ. ಈ ಪೋಸ್ಟರ್​ ವಿನಂತಿಯಲ್ಲ. ಬದಲಾಗಿ ಸನಾತಕ ಧರ್ಮವನ್ನು ಗೌರವಿಸದವರಿಗೆ ನೀಡಲಾದ ಎಚ್ಚರಿಕೆ ಎಂದು ಹೇಳಿದರು.

Posters Ban Entry Of Non-Hindus To Varanasi Ghats

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...