alex Certify ದುರಂತ ಅಂತ್ಯ ಕಂಡ ಸ್ನೇಹಿತರ ಪ್ರವಾಸ: ಮಿತ್ರರ ಕಣ್ಣೆದುರಲ್ಲೇ ಜಲ ಸಮಾಧಿಯಾದ ಟೆಕ್ಕಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುರಂತ ಅಂತ್ಯ ಕಂಡ ಸ್ನೇಹಿತರ ಪ್ರವಾಸ: ಮಿತ್ರರ ಕಣ್ಣೆದುರಲ್ಲೇ ಜಲ ಸಮಾಧಿಯಾದ ಟೆಕ್ಕಿ…..!

ಪ್ರವಾಸಕ್ಕೆಂದು ಬಂದಿದ್ದ 33 ವರ್ಷದ ಟೆಕ್ಕಿಯೊಬ್ಬ ನೀರಿನಲ್ಲಿ ಕಾಲ್ಜಾರಿ ಬಿದ್ದು ಸಾವನ್ನಪ್ಪಿದ ದಾರುಣ ಘಟನೆಯು ತೆಲಂಗಾಣದ ಮುಲುಗು ಜಿಲ್ಲೆಯ ಕೊಂಗಲಾ ಜಲಪಾತದಲ್ಲಿ ನಡೆದಿದೆ.

ಹೈದರಾಬಾದ್​ನಿಂದ ತನ್ನ ಮೂವರು ಸ್ನೇಹಿತರ ಜೊತೆಯಲ್ಲಿ ಟ್ರಿಪ್​ಗೆಂದು ಈ ಜಲಪಾತಕ್ಕೆ ಬಂದಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಮಾತನಾಡಿದ ವಾಜೆಡು ಸಬ್​ ಇನ್​​ಸ್ಪೆಕ್ಟರ್​ ತಿರುಪತಿ ರಾವ್​, 33 ವರ್ಷದ ಸಾಫ್ಟ್​ವೇರ್​ ಇಂಜಿನಿಯರ್​​ ಪಿ.ರಾಹುಲ್​ ತರ್ನಾಕಾ ನಿವಾಸಿಯಾಗಿದ್ದು ಜಲಪಾತದಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಹೈದರಾಬಾದ್​ನ ಐಟಿ ಕಂಪನಿಯಲ್ಲಿ ರಾಹುಲ್​ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದರು ಎಂದು ಹೇಳಿದ್ದಾರೆ.

ಹೂಡಿಕೆ ಹಣ ದ್ವಿಗುಣಗೊಳ್ಳುವುದು ಹೇಗೆ….? `72ರ ನಿಯಮ’ದಡಿ ಲೆಕ್ಕ ಮಾಡಿ

ಬೆಳಗ್ಗೆ 6 ಗಂಟೆ ಸುಮಾರಿಗೆ ಜಲಪಾತ ತಲುಪಿದ್ದ ನಾಲ್ವರು ಸ್ನೇಹಿತರು ನೀರಿಗೆ ಇಳಿದಿದ್ದರು. ಇದರಲ್ಲಿ ರಾಹುಲ್​ ಆಯತಪ್ಪಿ ದುರಂತ ಅಂತ್ಯ ಕಂಡಿದ್ದಾರೆ. ಇನ್ನುಳಿದಂತೆ ಮೂವರು ಅಪಾಯದಿಂದ ಪಾರಾಗಿದ್ದಾರೆ. ರಾಹುಲ್​ ನೀರು ಪಾಲಾಗುತ್ತಿದ್ದಂತೆಯೇ ಉಳಿದ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಜ್ಞ ಈಜುಗಾರರ ಸಹಾಯದಿಂದ ರಾಹುಲ್​ ಮೃತ ದೇಹವನ್ನು ಹೊರ ತೆಗೆಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...