alex Certify ‘ಅತಿಥಿ ಉಪನ್ಯಾಸಕ’ರ ಸೇವೆ ಖಾಯಂ ಮಾಡಿದ್ರೆ ಕಾನೂನು ಪ್ರಕಾರ ಕಷ್ಟ ಆಗುತ್ತದೆ : CM ಸಿದ್ದರಾಮಯ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಅತಿಥಿ ಉಪನ್ಯಾಸಕ’ರ ಸೇವೆ ಖಾಯಂ ಮಾಡಿದ್ರೆ ಕಾನೂನು ಪ್ರಕಾರ ಕಷ್ಟ ಆಗುತ್ತದೆ : CM ಸಿದ್ದರಾಮಯ್ಯ

ಕೊಪ್ಪಳ : ಅತಿಥಿ ಉಪನ್ಯಾಸಕರ ಸೇವೆ ಖಾಯಂ ಮಾಡಿದ್ರೆ ಕಾನೂನು ಪ್ರಕಾರ ಕಷ್ಟವಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಕೊಪ್ಪಳದ ಗಣೀಗೇರಾದಲ್ಲಿ ಮಾತನಾಡಿದ ಅವರು ಅತಿಥಿ ಉಪನ್ಯಾಸಕರ ಸೇವೆ ಖಾಯಂ ಕಷ್ಟದ ಕೆಲಸ, ಅತಿಥಿ ಉಪನ್ಯಾಸಕರ ಸೇವೆ ಖಾಯಂ ಮಾಡಿದ್ರೆ ಕಾನೂನು ಪ್ರಕಾರ ಕಷ್ಟವಾಗುತ್ತದೆ ಎಂದರು.ಇದೇ ವೇಳೆ ಮಾತನಾಡಿದ ಸಿಎಂ  ಕೇಂದ್ರ ಸರ್ಕಾರ ರಾಮಮಂದಿರವನ್ನು ಉದ್ಘಾಟನೆ ಮಾಡುತ್ತಿದೆ. ರಜೆ ನೀಡುವ ನಿರ್ಧಾರವನ್ನು ಕೇಂದ್ರ ಸರ್ಕಾರವೇ ತೆಗೆದುಕೊಳ್ಳಲಿದೆ. ರಾಮಮಂದಿರಕ್ಕೆ ಯಾರಿಗೆ ಆಹ್ವಾನ ನೀಡಿದ್ದಾರೋ ಗೊತ್ತಿಲ್ಲ, ಅದು ಅವರಿಗೆ ಬಿಟ್ಟದ್ದು ಎಂದರು.

ಸೇವೆ ಖಾಯಂಗೊಳಿಸುವಂತೆ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಿದ್ದಾರೆ. ನಾಳೆ ಬೆಂಗಳೂರಲ್ಲಿ ಅತಿಥಿ ಉಪನ್ಯಾಸಕರ ಬೃಹತ್ ಸಮಾವೇಶ ನಡೆಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...