alex Certify ಮೊಸರಿಗಾಗಿ ದಾರಿ ಮಧ್ಯೆಯೇ ರೈಲು ನಿಲ್ಲಿಸಿದ ಚಾಲಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಸರಿಗಾಗಿ ದಾರಿ ಮಧ್ಯೆಯೇ ರೈಲು ನಿಲ್ಲಿಸಿದ ಚಾಲಕ….!

ಲಾಹೋರ್ : ಊಟ ಸೇರಿದಂತೆ ಏನಾದರೂ ಅವಶ್ಯಕ ವಸ್ತುಗಳು ಬೇಕಾದಲ್ಲಿ ಅಥವಾ ಊಟ ಮಾಡುವುದಕ್ಕಾಗಿ ಬಸ್, ಲಾರಿ ಸೇರಿದಂತೆ ಪ್ರಯಾಣಿಕರನ್ನು ಹೊತ್ತು ಸಾಗುವ ವಾಹನಗಳು ನಿಲ್ಲಿಸುವುದು ಸಹಜ. ಆದರೆ, ಇಲ್ಲೊಬ್ಬ ಚಾಲಕ ಕೇವಲ ಮೊಸರು ತರುವುದಕ್ಕಾಗಿ ರೈಲನ್ನೇ ನಿಲ್ಲಿಸಿದ್ದಾನೆ.

ಈ ಘಟನೆ ಪಾಕ್ ನ ಲಾಹೋರ್ ನಲ್ಲಿ ನಡೆದಿದೆ. ಲಾಹೋರ್ ನ ರೈಲು ನಿಲ್ದಾಣ ಬರುವುದಕ್ಕೂ ಮುನ್ನ ಚಾಲಕ ಮೊಸರು ತರುವುದಕ್ಕಾಗಿ ಚಾಲಕ ಹಾಗೂ ಆತನ ಸಹಾಯಕ ರೈಲನ್ನು ನಿಲ್ಲಿಸಿದ್ದಾರೆ. ಚಾಲಕ ಮೊಸರು ತೆಗೆದುಕೊಂಡು ಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.

ಇದನ್ನು ಗಮನಿಸಿದ ಅಲ್ಲಿಯ ರೈಲ್ವೆ ಸಚಿವ ಅಜಂ ಖಾನ್ ಸ್ವಾತಿ, ಚಾಲಕ ರಾಣಾ ಮೊಹಮ್ಮದ್ ಶೆಹಜಾದ್ ಹಾಗೂ ಆತನ ಸಹಾಯಕ ಇಫ್ತಿಕರ್ ಹುಸೇನ್ ನ್ನು ಅಮಾನತು ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...