alex Certify ಮೈಸೂರು ದಸರಾ ತಯಾರಿ ವೇಳೆ ಅವಘಡ: ಪೇಂಟಿಂಗ್​ ಮಾಡುವಾಗ ಕೆಳಗೆ ಬಿದ್ದ ಕಾರ್ಮಿಕನಿಗೆ ತೀವ್ರ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈಸೂರು ದಸರಾ ತಯಾರಿ ವೇಳೆ ಅವಘಡ: ಪೇಂಟಿಂಗ್​ ಮಾಡುವಾಗ ಕೆಳಗೆ ಬಿದ್ದ ಕಾರ್ಮಿಕನಿಗೆ ತೀವ್ರ ಗಾಯ

ವಿಶ್ವ ವಿಖ್ಯಾತ ಮೈಸೂರು ದಸರಾಗೆ ಭರದಿಂದ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಅರಮನೆಗೆ ಸಂಬಂಧಿಸಿದ ಎಲ್ಲಾ ಕಟ್ಟಡಗಳಿಗೆ ಸುಣ್ಣ ಬಣ್ಣಗಳನ್ನು ಬಳಿಯಲಾಗುತ್ತಿದೆ. ದಸರಾ ಸಿದ್ಧತೆಯ ನಡುವೆಯೇ ಅರಮನೆ ಆವರಣದಲ್ಲಿ ಅವಘಡವೊಂದು ನಡೆದಿದೆ.

ಅರಮನೆ ಆವರಣದಲ್ಲೇ ಇರುವ ತ್ರಿನೇಶ್ವರ ದೇಗುಲಕ್ಕೆ ಬಣ್ಣ ಬಳಿಯುತ್ತಿದ್ದ ವೇಳೆ ಕಾರ್ಮಿಕನೊಬ್ಬ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾನೆ. ಕಟ್ಟಡಕ್ಕೆ ಸುಣ್ಣ ಬಳಿಯುತ್ತಿದ್ದ ಕಾರ್ಮಿಕ ಅಫ್ತಾಬ್​​ ಸುಮಾರು 25 ಅಡಿ ಎತ್ತರದ ಕಟ್ಟಡದಿಂದ ಕೆಳಕ್ಕೆ ಬಿದ್ದಿದ್ದಾರೆ.
ಅವಘಡದಲ್ಲಿ ಅಫ್ತಾಬ್​ ತಲೆಗೆ ಬಲವಾದ ಪೆಟ್ಟು ಬಿದ್ದಿದೆ.

ಕೂಡಲೇ ಸಮೀಪದಲ್ಲೇ ಇದ್ದ ಕಾರ್ಮಿಕರು ಅಫ್ತಾಬ್​ ಸಹಾಯಕ್ಕೆ ಧಾವಿಸಿದ್ದಾರೆ. ಗುತ್ತಿಗೆದಾರ ಕಾರ್ಮಿಕರ ಅಫ್ತಾಬ್​ರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಮುಂದುವರಿದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...