ವ್ಯಕ್ತಿಯೊಬ್ಬ ತನ್ನ ನಿರುದ್ಯೋಗಿ 40 ವರ್ಷದ ಮಗನನ್ನು ಕಟ್ಟಿಹಾಕಿ ಮಧ್ಯಾಹ್ನದ ಬಿಸಿಲಿನಲ್ಲಿ ಸಾಯಲು ಬಿಟ್ಟಿದ್ದಾನೆ. ಈ ಕಾರಣಕ್ಕೆ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮಗ ಸುಮಂತ್ ನಾಯಕ್ ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾನೆ.
ಸೊಂಟ ಮುರಿತಕ್ಕೆ ಒಳಗಾದ ತಾಯಿಯನ್ನು ಹೊಡೆದಿದ್ದಕ್ಕಾಗಿ ಅರವತ್ತೆಂಟು ವರ್ಷದ ಪನುವಾ ನಾಯಕ್ ತನ್ನ ಮಗ ಸುಮಂತ್ಗೆ ಕಠಿಣ ಶಿಕ್ಷೆ ನೀಡಲು ಬಯಸಿದ್ದ.
ಬರೋಬ್ಬರಿ 18 ಲಕ್ಷ ರೂಪಾಯಿಗಳಿಗೆ ‘ಚಾಮುಂಡಿ’ ಹೋರಿ ಖರೀದಿ
ಗುರುವಾರ ಮದ್ಯದ ಅಮಲಿನಲ್ಲಿದ್ದ ಸುಮಂತ್ ತನ್ನ ತಾಯಿಗೆ ಥಳಿಸಿದ್ದ ಮತ್ತು ಆಗಾಗ್ಗೆ ತನ್ನ ಹೆಂಡತಿಯನ್ನು ಹೊಡೆಯುತ್ತಿದ್ದ. ಶನಿವಾರ ಜಗಳ ಆರಂಭಿಸಿದಾಗ ಪನುವಾ ಮಗನಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿ ಕೈಕಾಲು ಕಟ್ಟಿ ಬಯಲಿನಲ್ಲಿ ಬಿಟ್ಟಿದ್ದಾನೆ.
ಸುಮಂತ್ನ ಕೈ, ಕಾಲುಗಳನ್ನು ಪ್ಲಾಸ್ಟಿಕ್ ಹಗ್ಗದಿಂದ ಕಟ್ಟಿ ಅವನನ್ನು ಸುಡುವ ಸೂರ್ಯನ ಕೆಳಗೆ ಮಧ್ಯಾಹ್ನ 2 ಗಂಟೆಗೆ ಬಿಟ್ಟಿದ್ದು, ಮನವಿ ಮಾಡಿದರೂ ಒಂದು ಹನಿ ನೀರು ಕೂಡ ಕೊಟ್ಟಿರಲಿಲ್ಲ. ಅದು ಅವನ ಮಗನ ಸಾವಿಗೆ ಕಾರಣವಾಯಿತು.
ಘಾಟಗೋನ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ತಪನ್ ಕುಮಾರ್ ಜೆನಾ, ಪನುವಾ ನಾಯಕ್ ನನ್ನು ಬಂಧಿಸಲಾಗಿದೆ ಮತ್ತು ಶವಪರೀಕ್ಷೆ ವರದಿಯು ಅವನ ಪಾತ್ರ ದೃಢಪಡಿಸಿದ ನಂತರ ಕೊಲೆ ಆರೋಪದ ಮೇಲೆ ಬಂಧಿಸಲಾಗುವುದು ಎಂದು ಹೇಳಿದ್ದಾರೆ.