alex Certify ದೆಹಲಿ ಸರ್ಕಾರದ ತೀರ್ಥಯಾತ್ರೆ ಯೋಜನೆಯಲ್ಲಿ ಅಯೋಧ್ಯೆ ಸೇರ್ಪಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೆಹಲಿ ಸರ್ಕಾರದ ತೀರ್ಥಯಾತ್ರೆ ಯೋಜನೆಯಲ್ಲಿ ಅಯೋಧ್ಯೆ ಸೇರ್ಪಡೆ

ಹಿರಿಯ ನಾಗಕರಿಗೆ ಉಚಿತ ತೀರ್ಥಯಾತ್ರೆಯನ್ನು ಕಲ್ಪಿಸುವ ದೆಹಲಿ ಸರ್ಕಾರದ ತೀರ್ಥಯಾತ್ರಾ ಯೋಜನೆಗೆ ಅಯೋಧ್ಯೆಯನ್ನು ಸೇರ್ಪಡೆ ಮಾಡಲಾಗಿದೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಮಹತ್ವದ ಮಾಹಿತಿ ನೀಡಿದ್ದಾರೆ.

ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​​ರ ಈ ಘೋಷಣೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಯೋಧ್ಯೆಯನ್ನು ತೀರ್ಥಯಾತ್ರೆ ಸ್ಥಳವೆಂದು ಪರಗಣಿಸಿ ಅವಕಾಶ ನೀಡಿದ್ದಕ್ಕೆ ಅನೇಕರು ಹರ್ಷ ವ್ಯಕ್ತಪಡಿಸಿದ್ದರೆ ಇನ್ನೂ ಕೆಲವರು ಉತ್ತರ ಪ್ರದೇಶದಲ್ಲೂ ಆಮ್​ ಆದ್ಮಿ ಪಕ್ಷವನ್ನು ಬೇರೂರುವಂತೆ ಮಾಡಲು ಅರವಿಂದ್​ ಕೇಜ್ರಿವಾಲ್​ ಮಾಡಿರುವ ಹುನ್ನಾರವಿದು ಎಂದು ಟೀಕಿಸುತ್ತಿದ್ದಾರೆ.

ದೀದಿ ನಾಡಲ್ಲಿ ʼದೀಪಾವಳಿʼ ಸಂಭ್ರಮಕ್ಕೆ ಬ್ರೇಕ್​​, ಹಸಿರು ಪಟಾಕಿಗೆ ಮಾತ್ರ ಪರ್ಮಿಷನ್

ದೆಹಲಿ ಸರ್ಕಾರ ಘೋಷಿಸಿರುವ ಈ ಯೋಜನೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಿಂದ ವಾರ್ಷಿಕವಾಗಿ 1100 ವೃದ್ಧರನ್ನು ಉಚಿತವಾಗಿ ತೀರ್ಥಯಾತ್ರೆಗೆ ಕೊಂಡೊಯ್ಯಲಾಗುತ್ತದೆ. ಈ ತೀರ್ಥಯಾತ್ರೆಯ ಸಂಪೂರ್ಣ ಖರ್ಚನ್ನು ದೆಹಲಿ ಸರ್ಕಾರವೇ ಭರಿಸುತ್ತದೆ. 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ದೆಹಲಿ ಸರ್ಕಾರದ ಈ ಯೋಜನೆಯ ಲಾಭ ಪಡೆಯಲು ಅವಕಾಶ ಇರುತ್ತದೆ. 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ತಮ್ಮ ಜೊತೆ ಇನ್ನೊಬ್ಬ ಸದಸ್ಯರನ್ನು ಕರೆದುಕೊಂಡು ಹೋಗಲು ಸಹ ಅವಕಾಶ ಕಲ್ಪಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...