alex Certify ‘ಅಕ್ಕ, ನಮ್ಮ ಕ್ಷೇತ್ರದಲ್ಲೂ ದಯಮಾಡಿ ಅಕ್ರಮ ಗಣಿಗಾರಿಕೆ ನಿಲ್ಲಿಸಕ್ಕ’: ಸುಮಲತಾ ವಿರುದ್ಧ ಜೆಡಿಎಸ್ ಶಾಸಕನ ವ್ಯಂಗ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಅಕ್ಕ, ನಮ್ಮ ಕ್ಷೇತ್ರದಲ್ಲೂ ದಯಮಾಡಿ ಅಕ್ರಮ ಗಣಿಗಾರಿಕೆ ನಿಲ್ಲಿಸಕ್ಕ’: ಸುಮಲತಾ ವಿರುದ್ಧ ಜೆಡಿಎಸ್ ಶಾಸಕನ ವ್ಯಂಗ್ಯ

ಕೆಆರ್​ಎಸ್​ ಡ್ಯಾಂ ವಿಚಾರವಾಗಿ ಶುರುವಾದ ವಾಕ್ಸಮರ ಇನ್ನೂ ಆರಿದಂತೆ ಕಾಣುತ್ತಿಲ್ಲ. ಇಂದು ಮಾತನಾಡಿದ ನಾಗಮಂಗಲ ಜೆಡಿಎಸ್​ ಶಾಸಕ ಸುರೇಶ್​ ಗೌಡ ಅಕ್ಕ, ದಯಮಾಡಿ ಬಂದು ಅಕ್ರಮ ಗಣಿಗಾರಿಕೆ ನಿಲ್ಲಿಸಿಕೊಡಿ ಎಂದು ಸುಮಲತಾ ವಿರುದ್ಧ ವ್ಯಂಗ್ಯವಾಡಿದ್ದಾರೆ.

ನಾಗಮಂಗಲದಲ್ಲಿ ಅತೀ ಹೆಚ್ಚು ಗಣಿಗಾರಿಕೆ ನಡೆಯುತ್ತಿದೆ. ಮಂತ್ರಿಗಳು, ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಸಿಎಂ ಯಡಿಯೂರಪ್ಪ ಅಕ್ರಮ ಗಣಿಗಾರಿಕೆ ಸಕ್ರಮ ಮಾಡಿಕೊಳ್ಳಿ ಎಂದಿದ್ದಾರೆ. ಹೀಗಾಗಿ ನಾವು ಏನೂ ಮಾಡಲಾಗದೇ ಸುಮ್ಮನಿದ್ದೇವೆ. ಆದರೆ ಈಗ ಅಕ್ಕ ಎದ್ದವ್ರೆ, ಅವರ ಹೋರಾಟಕ್ಕೆ ಜಯವಾಗಲಿ. ನಾಗಮಂಗಲದಲ್ಲಿ ಬಂದು ಅಕ್ರಮ ಗಣಿಗಾರಿಕೆ ನಿಲ್ಲಿಸಿಕೊಡಲಿ. ಅವರಿಗೆ ಏನೂ ತೊಂದರೆ ಆಗದಂತೆ ನಾನು ನೋಡಿಕೊಳ್ಳುತ್ತೇನೆ.

ನಾನು ಅಕ್ಕನ ಬಳಿ ಬೇಡಿಕೊಳ್ಳೋದು ಇಷ್ಟೇ. ನನ್ನ ತಾಲೂಕಿನ ತುಂಬೆಲ್ಲಾ ಗಣಿಗಾರಿಕೆ ನಡೆಯುತ್ತಿದೆ. ನೀವೇ ಬಂದು ಇದನ್ನ ನಿಲ್ಲಿಸಿಕೊಡಿ. ಈ ಬಗ್ಗೆ ನಾನು ಸುಮಲತಾ ಅಂಬರೀಶ್​ಗೆ ಪತ್ರವನ್ನೂ ಬರೆಯಲಿದ್ದೇನೆ ಎಂದು ವ್ಯಂಗ್ಯ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...