alex Certify BIG NEWS: ಸಮೀರ್​ ವಾಂಖೆಡೆ ವಿರುದ್ಧ ತನಿಖೆಗೆ ವಿಶೇಷ ಅಧಿಕಾರಿ ನೇಮಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಮೀರ್​ ವಾಂಖೆಡೆ ವಿರುದ್ಧ ತನಿಖೆಗೆ ವಿಶೇಷ ಅಧಿಕಾರಿ ನೇಮಕ

ಡ್ರಗ್ಸ್​ ಪ್ರಕರಣದಲ್ಲಿ ಲಂಚ ಸ್ವೀಕಾರದ ಆರೋಪ ಎದುರಿಸುತ್ತಿರುವ ಎನ್.​ಸಿ.ಬಿ ವಲಯ ನಿರ್ದೇಶಕ ಸಮೀರ್​ ವಾಂಖೆಡೆ ವಿರುದ್ಧ ತನಿಖೆಗೆ ಮುಂಬೈ ಪೊಲೀಸರು ಎಸಿಪಿ ಮಟ್ಟದ ಅಧಿಕಾರಿಯನ್ನು ನೇಮಕ ಮಾಡಿದ್ದಾರೆ.

ವಾಂಖೆಡೆ ವಿರುದ್ಧ ಎದುರಾಗಿರುವ ಎಲ್ಲಾ ಆರೋಪಗಳ ತನಿಖೆಯನ್ನು ಈ ಅಧಿಕಾರಿ ನೋಡಿಕೊಳ್ಳಲಿದ್ದಾರೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ಮುಂಬೈನ ನಾಲ್ಕು ಪೊಲೀಸ್​ ಠಾಣೆಗಳಲ್ಲಿ ವಾಂಖೆಡೆ ವಿರುದ್ಧ ವಿವಿಧ ಪ್ರಕರಣಗಳು ದಾಖಲಾಗಿವೆ.

ಪ್ರಕರಣದ ಸಾಕ್ಷಿದಾರರಲ್ಲಿ ಒಬ್ಬರಾದ ಕೆ.ಸಿ. ಗೋಸಾವಿ ಅವರ ಭದ್ರತಾ ಸಿಬ್ಬಂದಿ ಪ್ರಭಾಕರ್ ಸೈಲ್​ ಎಂಬವರು ಡ್ರಗ್ಸ್​ ಪ್ರಕರಣದಲ್ಲಿ ಆರ್ಯನ್​ ಖಾನ್​ರನ್ನು ದೋಷಮುಕ್ತಗೊಳಿಸಲು ಶಾರೂಕ್​ ಖಾನ್​ ಮ್ಯಾನೇಜರ್​ ಸಾಕ್ಷಿದಾರ ಗೋಸಾವಿಯ ಜೊತೆಯಲ್ಲಿ 18 ಕೋಟಿ ರೂಪಾಯಿ ಡೀಲ್​ ಮಾಡಿಕೊಂಡಿದ್ದರು. ಇದರಲ್ಲಿ 8 ಕೋಟಿ ರೂಪಾಯಿ ವಾಂಖೆಡೆಗೆ ನೀಡುವ ಬಗ್ಗೆಯೂ ಮಾತುಕತೆ ನಡೆದಿತ್ತು ಎಂದು ಹೇಳಿದ್ದರು. ಪ್ರಭಾಕರ್​ ಸೈಲ್​ ಈ ಆರೋಪಗಳ ಬಳಿಕ ಪ್ರಕರಣ ರೋಚಕ ತಿರುವು ಪಡೆದುಕೊಂಡಿದೆ.

ವಾಂಖೆಡೆ ವಿರುದ್ಧ ಲಂಚಾವತಾರದ ಆರೋಪಗಳು ಎದುರಾಗುತ್ತಿದ್ದಂತೆಯೇ ಎನ್​ಸಿಪಿ ನಾಯಕ ನವಾಬ್​ ಮಲ್ಲಿಕ್,​ ಆರ್ಯನ್​ ಖಾನ್​, ಶಿವಸೇನೆ ನಾಯಕ ಸಂಜಯ್​ ರಾವತ್​ ಜೊತೆಯಲ್ಲಿ ಕೆ.ಸಿ. ಗೋಸಾವಿ ಮಾತುಕತೆಯ ಆಡಿಯೋವನ್ನು ರಿಲೀಸ್​ ಮಾಡುವ ಮೂಲಕ ವಾಂಖೆಡೆ ವಿರುದ್ಧ ಹರಿಹಾಯ್ದಿದ್ದರು.

ಆದರೆ ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿರುವ ಸಮೀರ್​ ವಾಂಖೆಡೆ, ಡ್ರಗ್ಸ್​ ಪ್ರಕರಣದಲ್ಲಿ ಪ್ರಾಮಾಣಿಕ ತನಿಖೆ ನಡೆಯುವುದು ಕೆಲವರಿಗೆ ಬೇಕಾಗಿಲ್ಲ. ಹೀಗಾಗಿ ನನ್ನ ವಿರುದ್ಧ ಲಂಚಾವತಾರದ ಆರೋಪಗಳನ್ನು ಮಾಡುವ ಮೂಲಕ ತನಿಖೆಯ ದಿಕ್ಕನ್ನು ತಪ್ಪಿಸಲಾಗ್ತಿದೆ ಎಂದು ಕಿಡಿಕಾರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...