alex Certify ಸೈಬರ್​ ವಂಚಕರ ಜಾಲದಲ್ಲಿ ಸಿಲುಕಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೈಬರ್​ ವಂಚಕರ ಜಾಲದಲ್ಲಿ ಸಿಲುಕಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ….!

ದೇಶದಲ್ಲಿ ದಿನದಿಂದ ದಿನಕ್ಕೆ ಸೈಬರ್​ ವಂಚನೆ ಪ್ರಕರಣಗಳು ಮಿತಿಮೀರುತ್ತಿದೆ. ಈ ಜಾಲಕ್ಕೆ ವಿದ್ಯಾವಂತರೇ ಸಿಲುಕಿಹಾಕಿಕೊಳ್ಳುತ್ತಿರೋದು ದುರಂತ. ಇದೀಗ ಈ ಸಾಲಿಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿನೋದ್​ ಕಾಂಬ್ಳಿ ಸಹ ಸೇರಿದ್ದಾರೆ.

ಬ್ಯಾಂಕ್​ ಸಿಬ್ಬಂದಿ ಸೋಗಿನಲ್ಲಿ ಬಂದ ಕರೆಯನ್ನು ನಂಬಿದ ವಿನೋದ್​ ಕಾಂಬ್ಳಿ 1.14 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಖಾಸಗಿ ಬ್ಯಾಂಕ್​​ನ ಎಕ್ಸಿಕ್ಯೂಟಿವ್​ ಎಂದು ಪರಿಚಯಿಸಿಕೊಂಡ ವಂಚಕ ನೀವು ಬ್ಯಾಂಕ್​​ ಕೆವೈಸಿ ಅಪ್​ಡೇಟ್​ ಮಾಡದೇ ಹೋದಲ್ಲಿ ನಿಮ್ಮ ಎಟಿಎಂ ಕಾರ್ಡ್​ಗಳು ಈ ಕೂಡಲೇ ರದ್ದಾಗಲಿವೆ ಎಂದು ಬೆದರಿಸಿದ್ದಾನೆ.

ವಂಚಕನ ಮಾತನ್ನೇ ನಿಜವೆಂದು ನಂಬಿದ ವಿನೋದ್ ಕಾಂಬ್ಳಿ ಕೂಡಲೇ ತಮ್ಮ ಕೆವೈಸಿ ಅಪ್​​ಡೇಟ್​ ಮಾಡಲು ಮುಂದಾಗಿದ್ದಾರೆ. ಈ ವೇಳೆ ವಂಚಕ ಎನಿ ಡೆಸ್ಕ್​ ಅಪ್ಲಿಕೇಶನ್​ ಡೌನ್​ಲೋಡ್​ ಮಾಡಿಕೊಳ್ಳುವಂತೆ ಹೇಳಿದ್ದಾನೆ. ವಿನೋದ್​ ಕಾಂಬ್ಳಿ ತಮ್ಮ ಸ್ಕ್ರೀನ್​​ನಲ್ಲಿ ನಮೂದಿಸಿದ ಪ್ರತಿಯೊಂದು ಮಾಹಿತಿಯನ್ನೂ ಎನಿ ಡೆಸ್ಕ್​ ಅಪ್ಲಿಕೇಶನ್​ ಮೂಲಕ ನೋಡಿದ ವಂಚಕ ಆ ಕೂಡಲೇ ಅನೇಕ ಟ್ರಾನ್ಸಾಕ್ಷನ್​ಗಳ ಮೂಲಕ ಒಟ್ಟು 1.14 ಲಕ್ಷ ರೂಪಾಯಿ ಟ್ರಾನ್ಸಫರ್​ ಮಾಡಿಕೊಂಡು ಕಾಲ್​ ಕಟ್​ ಮಾಡಿದ್ದಾನೆ.

ತಾನು ವಂಚಕರ ಜಾಲದಲ್ಲಿ ಬಿದ್ದಿದ್ದೇನೆ ಎಂದು ಅರಿವಾದ ತಕ್ಷಣವೇ ಕಾಂಬ್ಳಿ ಸಿಎ ಅಧಿಕಾರಿಗಳು ಹಾಗೂ ಬ್ಯಾಂಕ್​ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಅಲ್ಲದೇ ಬಾಂದ್ರಾ ಪೊಲೀಸ್​ ಠಾಣೆಗೆ ದೂರನ್ನೂ ನೀಡಿದ್ದಾರೆ. ತಕ್ಷಣ ಅಲರ್ಟ್ ಆದ ಸೈಬರ್​ ಕ್ರೈಂ ವಿಭಾಗದ ಪೊಲೀಸರು ಕಾಂಬ್ಳೆ ಹಣವನ್ನು ಬ್ಯಾಂಕ್​ ಅಧಿಕಾರಿಗಳ ಸಹಾಯದಿಂದ ರಿವರ್ಸ್ ಟ್ರಾನ್ಸಾಕ್ಷನ್​ ಮಾಡುವ ಮೂಲಕ ವಾಪಸ್​ ಸಿಗುವಂತೆ ಮಾಡಿದ್ದಾರೆ.

ಆರೋಪಿ ಕರೆ ಮಾಡಿದ ಮೊಬೈಲ್​ ಸಂಖ್ಯೆ ಹಾಗೂ ಹಣ ಟ್ರಾನ್ಸಫರ್​ ಮಾಡಿಕೊಂಡ ಬ್ಯಾಂಕ್​ ಖಾತೆಯ ವಿವರ ಪಡೆದಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...