alex Certify ಪೊಲೀಸರನ್ನು ತುದಿಗಾಲಲ್ಲಿ ನಿಲ್ಲಿಸಿತ್ತು ಮಗು ಮಾಡಿದ ಕರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸರನ್ನು ತುದಿಗಾಲಲ್ಲಿ ನಿಲ್ಲಿಸಿತ್ತು ಮಗು ಮಾಡಿದ ಕರೆ

ಇಬ್ಬರು ಗನ್‌ಧಾರಿಗಳು ತಾಜ್ ಮಹಲ್ ಹೊಟೇಲ್ ಆವರಣದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಕರೆಯೊಂದು ಮುಂಬೈ ಪೊಲೀಸರನ್ನು ತುದಿಗಾಲಿಗೆ ತಂದಿಟ್ಟಿತ್ತು.

ಹೀಗೊಂದು ಕರೆಯನ್ನು ಸ್ವೀಕರಿಸಿದ ಹೊಟೇಲ್‌ನ ನಿಯಂತ್ರಣ ಕೊಠಡಿ ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಮುಂಬೈ ಪೊಲೀಸ್ ಜಾಗವನ್ನು ಕೂಲಂಕಷವಾಗಿ ಶೋಧಿಸಿದೆ. ಈ ವೇಳೆ ಯಾವುದೇ ಗನ್‌ಧಾರಿಗಳ ಸುಳಿವು ಸಿಕ್ಕಿಲ್ಲ.

ಇಲ್ಲಿವೆ ಸೌಂದರ್ಯವರ್ಧಕ ಜೇನಿನ ಹಲವು ‘ಉಪಯೋಗ’ಗಳು

ಈ ಕರೆಯನ್ನು ಪುಟ್ಟ ಮಗುವೊಂದು ಮಾಡಿದ್ದು ಅಂಥದ್ದೇನೂ ಗಂಭೀರವಾದದ್ದು ಕಂಡಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಘಟನೆ ಸಂಬಂಧ ತನಿಖೆಗೆ ಮುಂಬೈ ಪೊಲೀಸರು ಮುಂದಾಗಿದ್ದಾರೆ.

ಕಳೆದ ವರ್ಷ ಸಹ ಪಾಕಿಸ್ತಾನದಿಂದ ಬಂದ ಬೆದರಿಕೆ ಕರೆಯೊಂದರ ಹಿನ್ನೆಲೆಯಲ್ಲಿ ಮುಂಬೈನ ತಾಜ್ ಹೊಟೇಲ್ ಹಾಗೂ ತಾಜ್‌ ಲ್ಯಾಂಡ್ಸ್‌ ಎಂಡ್ ಹೊಟೇಲ್‌ನಲ್ಲಿ ಭದ್ರತೆ ಬಿಗಿ ಮಾಡಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...