alex Certify ದನ ಕಳ್ಳತನ; ಕರುಗಳೊಂದಿಗೆ ಗ್ರಾಮಸ್ಥರಿಂದ ಪ್ರತಿಭಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದನ ಕಳ್ಳತನ; ಕರುಗಳೊಂದಿಗೆ ಗ್ರಾಮಸ್ಥರಿಂದ ಪ್ರತಿಭಟನೆ

ಪೊಲೀಸರು ಜಾನುವಾರು ಕಳ್ಳತನದ ಪ್ರಕರಣವನ್ನು ದಾಖಲಿಸಲು ನಿರಾಕರಿಸಿದ್ದರಿಂದ ಗ್ರಾಮಸ್ಥರು ಕರುಗಳೊಂದಿಗೆ ವಿಶೇಷ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಪ್ರಸಂಗ ಮಧ್ಯಪ್ರದೇಶದಲ್ಲಿ ನಡೆದಿದೆ.

ಅಲ್ಲಿನ ಅಶೋಕನಗರ ಜಿಲ್ಲೆಯ ಹಳ್ಳಿಯೊಂದರ ಜನರು ಕರುಗಳೊಂದಿಗೆ ಪೊಲೀಸ್​ ಅಧೀಕ್ಷಕರ ಕಚೇರಿಯ ಹೊರಗೆ ನಡೆಸಿದ ಪ್ರತಿಭಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಕಾಣಿಸಿಕೊಂಡ ನಂತರ ದನ ಕಳ್ಳತನ ಕುರಿತು ಎಫ್‌‌ಐಆರ್​ ದಾಖಲಿಸಿದ್ದಾರೆ.

ಮಹೋಲಿ ಗ್ರಾಮದ ನಿವಾಸಿ ಸೇರಿದ ದೌಲತ್​ ಪಾಲ್​ ಎಮ್ಮೆಗಳನ್ನು ಮೂರು ದಿನಗಳ ಹಿಂದೆ ಸಮೀಪದ ಕಾಡಿನಲ್ಲಿ ಮೇಯಲು ಬಿಟ್ಟಿದ್ದು, ಐದು ಜಾನುವಾರುಗಳು ಹಿಂತಿರುಗಿರಲಿಲ್ಲ. ಹೀಗಾಗಿ ಇಶಗಢ ಪೊಲೀಸ್​ ಠಾಣೆಗೆ ಕಳ್ಳತನದ ಬಗ್ಗೆ ದೂರು ನೀಡಲು ಸಂಪರ್ಕಿಸಿದರು,

ಆದರೆ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದರು. ನಂತರ ಅವರು ಐದು ಕರುಗಳು ಮತ್ತು ಇತರ ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸಿದರು. ಈ ಪ್ರದೇಶದಲ್ಲಿ ಜಾನುವಾರು ಕಳ್ಳತನ ಹೆಚ್ಚಿದ್ದು, 3.5 ಲಕ್ಷ ರೂ.ಗೆ ಎಮ್ಮೆಗಳನ್ನು ಖರೀದಿಸಿ ಸಾಲ ಪಡೆದಿದ್ದಾಗಿ ಪಾಲ್​ ಕಳವಳ ವ್ಯಕ್ತಪಡಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...